<p><strong>ಕೋಲಾರ:</strong> ಕೋಲಾರದ ಚಿನ್ನದ ನಾಡು ಬ್ಯಾಸ್ಕೆಟ್ಬಾಲ್ ತಂಡ ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಈಚೆಗೆ ನಡೆದ ಬೆಂಗಳೂರು ಗ್ರಾಮೀಣ ವಿಭಾಗದ ಬ್ಯಾಸ್ಕೆಟ್ಬಾಲ್ ಲೀಗ್ ಚಾಂಪಿಯನ್ಷಿಪ್ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ.</p>.<p>ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಬ್ಯಾಸ್ಕೆಟ್ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆದ ಈ ಚಾಂಪಿಯನ್ಷಿಪ್ ಎರಡು ದಿನ ನಡೆಯಿತು.,</p>.<p>ಗೌರಿಬಿದನೂರಿನ ಪಿನಾಕಿನಿ ಬ್ಯಾಸ್ಕೆಟ್ಬಾಲ್ ತಂಡ ಪ್ರಥಮ ಸ್ಥಾನ ಪಡೆಯಿತು. ದಾವಣಗೆರೆಯ ತಂಡವು ತೃತೀಯ ಸ್ಥಾನ ಗಳಿಸಿತು.</p>.<p>ಅಂತಿಮ ಪಂದ ಪಿನಾಕಿನಿ ಮತ್ತು ಚಿನ್ನದ ನಾಡು ನಡುವೆ ನಡೆಯಿತು. ಪಿನಾಕಿನಿ ತಂಡ 68–59 ಪಾಯಿಂಟ್ಗಳಿಂದ ಚಿನ್ನದ ನಾಡು ತಂಡವನ್ನು ಮಣಿಸಿತು. ಮಧ್ಯಂತರ ಅವಧಿಯಲ್ಲಿ 40-28 ಪಾಯಿಂಟ್ ಇತ್ತು.</p>.<p>ಉತ್ತಮ ಆಟವಾಡಿದ ಪಿನಾಕಿನಿ ತಂಡದ ಪವನ್ 25 ಪಾಯಿಂಟ್, ವೇಣುಗೋಪಾಲ್ 21 ಪಾಯಿಂಟ್ ಗಳಿಸಿದರು. ಚಿನ್ನದ ನಾಡು ತಂಡದ ಯಶ್ವಂತ್ 18 ಮತ್ತು ತರುಣ್ 11 ಪಾಯಿಂಟ್ ಪಡೆದರು.</p>.<p>ಇದಕ್ಕೂ ಮೊದಲು ಪಿನಾಕಿಯ ತಂಡ 73– 60 ಪಾಯಿಂಟ್ಗಳಿಂದ ದಾವಣಗೆರೆ ತಂಡವನ್ನು ಸೋಲಿಸಿತ್ತು. ಚಿನ್ನದ ನಾಡು ತಂಡ 53–29 ಪಾಯಿಂಟ್ಗಳಿಂದ ದಾವಣಗೆರೆ ತಂಡವನ್ನು ಮಣಿಸಿತ್ತು.</p>.<p>ಈ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ಬ್ಯಾಸ್ಕೆಟ್ಬಾಲ್ ಕ್ಲಬ್, ಕೆಜಿಎಫ್, ಶ್ರೀದೇವರಾಜ ಅರಸು ಬ್ಯಾಸ್ಕೆಟ್ಬಾಲ್ ಕ್ಲಬ್, ಕೋಲಾರ ವೈಎಸ್ಬಿಸಿ, ಚಿಕ್ಕಬಳ್ಳಾಪುರ ಬ್ಯಾಸ್ಕೆಟ್ಬಾಲ್ ಕ್ಲಬ್, ನ್ಯೂವೇ ಆಫ್ ಲೈಫ್ ಬ್ಯಾಸ್ಕೆಟ್ಬಾಲ್ ಕ್ಲಬ್ ತಂಡಗಳು ಬಾಗವಹಿಸಿದ್ದವು.</p>.<p>ಚಿನ್ನದ ನಾಡು ಬ್ಯಾಸ್ಕೆಟ್ಬಾಲ್ ಕ್ಲಬ್ ಬೆಂಗಳೂರಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ರಾಜ್ಯ ಮಟ್ಟದ ಬ್ಯಾಸ್ಕೆಟ್ಬಾಲ್ ಟೂರ್ನಿಗೆ ಆಯ್ಕೆಯಾಗಿರುವುದಕ್ಕೆ ತಂಡದ ಗೌರವಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಕೋಲಾರದ ಚಿನ್ನದ ನಾಡು ಬ್ಯಾಸ್ಕೆಟ್ಬಾಲ್ ತಂಡ ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಈಚೆಗೆ ನಡೆದ ಬೆಂಗಳೂರು ಗ್ರಾಮೀಣ ವಿಭಾಗದ ಬ್ಯಾಸ್ಕೆಟ್ಬಾಲ್ ಲೀಗ್ ಚಾಂಪಿಯನ್ಷಿಪ್ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ.</p>.<p>ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಬ್ಯಾಸ್ಕೆಟ್ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆದ ಈ ಚಾಂಪಿಯನ್ಷಿಪ್ ಎರಡು ದಿನ ನಡೆಯಿತು.,</p>.<p>ಗೌರಿಬಿದನೂರಿನ ಪಿನಾಕಿನಿ ಬ್ಯಾಸ್ಕೆಟ್ಬಾಲ್ ತಂಡ ಪ್ರಥಮ ಸ್ಥಾನ ಪಡೆಯಿತು. ದಾವಣಗೆರೆಯ ತಂಡವು ತೃತೀಯ ಸ್ಥಾನ ಗಳಿಸಿತು.</p>.<p>ಅಂತಿಮ ಪಂದ ಪಿನಾಕಿನಿ ಮತ್ತು ಚಿನ್ನದ ನಾಡು ನಡುವೆ ನಡೆಯಿತು. ಪಿನಾಕಿನಿ ತಂಡ 68–59 ಪಾಯಿಂಟ್ಗಳಿಂದ ಚಿನ್ನದ ನಾಡು ತಂಡವನ್ನು ಮಣಿಸಿತು. ಮಧ್ಯಂತರ ಅವಧಿಯಲ್ಲಿ 40-28 ಪಾಯಿಂಟ್ ಇತ್ತು.</p>.<p>ಉತ್ತಮ ಆಟವಾಡಿದ ಪಿನಾಕಿನಿ ತಂಡದ ಪವನ್ 25 ಪಾಯಿಂಟ್, ವೇಣುಗೋಪಾಲ್ 21 ಪಾಯಿಂಟ್ ಗಳಿಸಿದರು. ಚಿನ್ನದ ನಾಡು ತಂಡದ ಯಶ್ವಂತ್ 18 ಮತ್ತು ತರುಣ್ 11 ಪಾಯಿಂಟ್ ಪಡೆದರು.</p>.<p>ಇದಕ್ಕೂ ಮೊದಲು ಪಿನಾಕಿಯ ತಂಡ 73– 60 ಪಾಯಿಂಟ್ಗಳಿಂದ ದಾವಣಗೆರೆ ತಂಡವನ್ನು ಸೋಲಿಸಿತ್ತು. ಚಿನ್ನದ ನಾಡು ತಂಡ 53–29 ಪಾಯಿಂಟ್ಗಳಿಂದ ದಾವಣಗೆರೆ ತಂಡವನ್ನು ಮಣಿಸಿತ್ತು.</p>.<p>ಈ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ಬ್ಯಾಸ್ಕೆಟ್ಬಾಲ್ ಕ್ಲಬ್, ಕೆಜಿಎಫ್, ಶ್ರೀದೇವರಾಜ ಅರಸು ಬ್ಯಾಸ್ಕೆಟ್ಬಾಲ್ ಕ್ಲಬ್, ಕೋಲಾರ ವೈಎಸ್ಬಿಸಿ, ಚಿಕ್ಕಬಳ್ಳಾಪುರ ಬ್ಯಾಸ್ಕೆಟ್ಬಾಲ್ ಕ್ಲಬ್, ನ್ಯೂವೇ ಆಫ್ ಲೈಫ್ ಬ್ಯಾಸ್ಕೆಟ್ಬಾಲ್ ಕ್ಲಬ್ ತಂಡಗಳು ಬಾಗವಹಿಸಿದ್ದವು.</p>.<p>ಚಿನ್ನದ ನಾಡು ಬ್ಯಾಸ್ಕೆಟ್ಬಾಲ್ ಕ್ಲಬ್ ಬೆಂಗಳೂರಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ರಾಜ್ಯ ಮಟ್ಟದ ಬ್ಯಾಸ್ಕೆಟ್ಬಾಲ್ ಟೂರ್ನಿಗೆ ಆಯ್ಕೆಯಾಗಿರುವುದಕ್ಕೆ ತಂಡದ ಗೌರವಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>