‘ಸುಧಾಕರ್ ಅಂತ ಆರೋಗ್ಯ ಸಚಿವ ಇದ್ದಾನೆ. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೂವರು ಸತ್ತಿದ್ದಾರೆ ಎಂದು ಆತ ಹೇಳಿದ್ದ. ಆದರೆ, ಆಸ್ಪತ್ರೆ ವೈದ್ಯರ ಹೇಳಿಕೆ ಪ್ರಕಾರ 28 ಜನ ಸತ್ತಿದ್ದಾರೆ. ಬಿಜೆಪಿಯವರು ಮಾನಗೆಟ್ಟ ಜನ. ರಾಜ್ಯದಲ್ಲಿ ಆಮ್ಲಜನಕ ಮತ್ತು ಕೋವಿಡ್ ಲಸಿಕೆ ಕೊರತೆಯಿದೆ. ರಾಜ್ಯಕ್ಕೆ 1,700 ಟನ್ ಆಮ್ಲಜನಕ ಬೇಕು. ಆದರೆ, ಕೇಂದ್ರ ಸರ್ಕಾರದಿಂದ ಕೇವಲ 800 ಟನ್ ಬರುತ್ತಿದೆ. ಸರ್ಕಾರಕ್ಕೆ ಏನು ಮಾಡಬೇಕೆಂದು ತಿಳಿಯದಾಗಿದೆ’ ಎಂದು ವ್ಯಂಗ್ಯವಾಡಿದರು.