<p><strong>ಕೋಲಾರ</strong>: ಜಿಲ್ಲೆಯ ಹೆಸರಾಂತ ಭಜನೆ ತತ್ವಪದ ಕಲಾವಿದ ಕೆ.ಎಸ್.ಚಂಗಪ್ಪ ಅವರು 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.</p>.<p>ಭಜನೆಯು ದೈವಾರಾಧನೆಯ ಕಲಾ ಪ್ರಕಾರ ಹಾಗೂ ದೇವಾಲಯಗಳಲ್ಲಿ ನಿತ್ಯ ಮಾರ್ದನಿಸುವ ಸಂಗೀತ ಸುಧೆ. ಹಳ್ಳಿಗಾಡಿನ ಸಂಗೀತಗಾರರನ್ನು ರೂಪಿಸುವ ಈ ಕಲಾ ಪ್ರಕಾರ ಮೈಗೂಡಿಸಿಕೊಂಡಿರುವ ಚಂಗಪ್ಪ ಅವರು ಹರಿಕಥೆ, ಭಜನೆ ತತ್ವಪದ, ದೇವರನಾಮಗಳ ಗಾಯನದಲ್ಲಿ ನಿಷ್ಣಾತರು.</p>.<p>ಗಡಿ ಜಿಲ್ಲೆ ಕೋಲಾರದ ಮುಳಬಾಗಿಲು ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ 1957ರಲ್ಲಿ ಜನಿಸಿದ ಇವರು ಎಸ್ಸೆಸ್ಸೆಲ್ಸಿ ಓದಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು ಮಾಲೂರು ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.</p>.<p>ತವರೂರಿನ ದೇವಾಲಯಗಳಲ್ಲಿ ನವಗ್ರಹ, ನಾಗರಕಲ್ಲು ಪ್ರತಿಷ್ಠಾಪನೆ ವೇಳೆ ಹರಿನಾಮ ಸಂಕೀರ್ತನೆ, ಭಜನೆ ತತ್ವಪದ ಗಾಯನದ ಮೂಲಕ ಚಂಗಪ್ಪ ಸ್ಥಳೀಯವಾಗಿ ಮನೆ ಮಾತಾಗಿದ್ದಾರೆ. ಶ್ರೀ ವೇಣುಗೋಪಾಲ ಸ್ವಾಮಿ ಕನ್ನಡ ಕಲಾ ಭಜನೆ ಸಂಘ ಸ್ಥಾಪಿಸಿರುವ ಇವರು ನೂರಾರು ಮಂದಿಗೆ ತತ್ವಪದ ಗಾಯನ ಕಲಿಸುತ್ತಿದ್ದಾರೆ.</p>.<p>ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿರುವ ಇವರು ಹರಿನಾಮ ಸಂಕೀರ್ತನೆ ಹಾಗೂ ಹರಿಕಥೆಯಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ. ಸಾವಿರಾರು ಕಾರ್ಯಕ್ರಮಗಳ ಮೂಲಕ ಕಲಾ ಸೇವೆ ಮುಂದುವರಿಸಿರುವ ಇವರು ಹೊಸ ಪೀಳಿಗೆಗೆ ಕಲಾ ತರಬೇತಿ ನೀಡುವ ಗುರುವಾಗಿದ್ದಾರೆ.</p>.<p>ಕಾಲಜ್ಞಾನಿ ಕೈವಾರ ತಾತಯ್ಯರ ತತ್ವಪದಗಳ ಗಾಯನದಲ್ಲಿ ಐದೂವರೆ ದಶಕದಿಂದ ತೊಡಗಿಸಿಕೊಂಡಿರುವ ಇವರು ಜನಮನ್ನಣೆ ಪಡೆದಿದ್ದಾರೆ. 80ರ ಇಳಿ ವಯಸ್ಸಿನಲ್ಲೂ ಹಾಡುಗಾರಿಕೆ ಮೂಲಕ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹಾನ್ ಕಲಾ ಚೇತನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ</strong>: ಜಿಲ್ಲೆಯ ಹೆಸರಾಂತ ಭಜನೆ ತತ್ವಪದ ಕಲಾವಿದ ಕೆ.ಎಸ್.ಚಂಗಪ್ಪ ಅವರು 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.</p>.<p>ಭಜನೆಯು ದೈವಾರಾಧನೆಯ ಕಲಾ ಪ್ರಕಾರ ಹಾಗೂ ದೇವಾಲಯಗಳಲ್ಲಿ ನಿತ್ಯ ಮಾರ್ದನಿಸುವ ಸಂಗೀತ ಸುಧೆ. ಹಳ್ಳಿಗಾಡಿನ ಸಂಗೀತಗಾರರನ್ನು ರೂಪಿಸುವ ಈ ಕಲಾ ಪ್ರಕಾರ ಮೈಗೂಡಿಸಿಕೊಂಡಿರುವ ಚಂಗಪ್ಪ ಅವರು ಹರಿಕಥೆ, ಭಜನೆ ತತ್ವಪದ, ದೇವರನಾಮಗಳ ಗಾಯನದಲ್ಲಿ ನಿಷ್ಣಾತರು.</p>.<p>ಗಡಿ ಜಿಲ್ಲೆ ಕೋಲಾರದ ಮುಳಬಾಗಿಲು ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ 1957ರಲ್ಲಿ ಜನಿಸಿದ ಇವರು ಎಸ್ಸೆಸ್ಸೆಲ್ಸಿ ಓದಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು ಮಾಲೂರು ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.</p>.<p>ತವರೂರಿನ ದೇವಾಲಯಗಳಲ್ಲಿ ನವಗ್ರಹ, ನಾಗರಕಲ್ಲು ಪ್ರತಿಷ್ಠಾಪನೆ ವೇಳೆ ಹರಿನಾಮ ಸಂಕೀರ್ತನೆ, ಭಜನೆ ತತ್ವಪದ ಗಾಯನದ ಮೂಲಕ ಚಂಗಪ್ಪ ಸ್ಥಳೀಯವಾಗಿ ಮನೆ ಮಾತಾಗಿದ್ದಾರೆ. ಶ್ರೀ ವೇಣುಗೋಪಾಲ ಸ್ವಾಮಿ ಕನ್ನಡ ಕಲಾ ಭಜನೆ ಸಂಘ ಸ್ಥಾಪಿಸಿರುವ ಇವರು ನೂರಾರು ಮಂದಿಗೆ ತತ್ವಪದ ಗಾಯನ ಕಲಿಸುತ್ತಿದ್ದಾರೆ.</p>.<p>ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿರುವ ಇವರು ಹರಿನಾಮ ಸಂಕೀರ್ತನೆ ಹಾಗೂ ಹರಿಕಥೆಯಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ. ಸಾವಿರಾರು ಕಾರ್ಯಕ್ರಮಗಳ ಮೂಲಕ ಕಲಾ ಸೇವೆ ಮುಂದುವರಿಸಿರುವ ಇವರು ಹೊಸ ಪೀಳಿಗೆಗೆ ಕಲಾ ತರಬೇತಿ ನೀಡುವ ಗುರುವಾಗಿದ್ದಾರೆ.</p>.<p>ಕಾಲಜ್ಞಾನಿ ಕೈವಾರ ತಾತಯ್ಯರ ತತ್ವಪದಗಳ ಗಾಯನದಲ್ಲಿ ಐದೂವರೆ ದಶಕದಿಂದ ತೊಡಗಿಸಿಕೊಂಡಿರುವ ಇವರು ಜನಮನ್ನಣೆ ಪಡೆದಿದ್ದಾರೆ. 80ರ ಇಳಿ ವಯಸ್ಸಿನಲ್ಲೂ ಹಾಡುಗಾರಿಕೆ ಮೂಲಕ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹಾನ್ ಕಲಾ ಚೇತನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>