ಮುಳಬಾಗಿಲು: ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಲು ಸಹಕಾರಿಯಾಗಿದ್ದು ತಾಲ್ಲೂಕಿನ ಮೂಡಿಯನೂರು ಗ್ರಾಮದಲ್ಲಿ ಸಿಕ್ಕಿದ ತಾಮ್ರದ ತಾಳೆಗಿರಿ ಪ್ರಮುಖವಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ 2018ರಲ್ಲಿ ಮದ್ರಾಸ್ ಹೈಕೋರ್ಟ್ನಲ್ಲಿ ವಕೀಲ ಆರ್.ಗಾಂಧಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತು. ಈ ತಾಳೆಗೆರೆಗಳನ್ನು ಕೋರ್ಟ್ಗೆ ಪೂರಕ ದಾಖಲೆಗಳಾಗಿ ಕರ್ನಾಟಕ ಸರ್ಕಾರ ಸಲ್ಲಿಸಿತ್ತು. ಕನ್ನಡಕ್ಕೆ ಪ್ರಾಚೀನ ಇತಿಹಾಸ ಇದೆ ಎಂಬುದಕ್ಕೆ ಈ ತಾಳೆಗಿರಿಗಳೇ ಸಾಕ್ಷಿ ಎಂಬುದನ್ನು ಮದ್ರಾಸ್ ಕೋರ್ಟ್ ಕೂಡ ಪರಿಗಣಿಸಿತ್ತು.