<p><strong>ಮುಳಬಾಗಿಲು</strong>: ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ತಾಲ್ಲೂಕು ನಿರ್ದೇಶಕರಾಗಿ ರಘುಪತಿ ರೆಡ್ಡಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.</p>.<p>ನಂತರ ನಗರದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸಮೃದ್ಧಿ ಮಂಜುನಾಥ್, ಮುಳಬಾಗಿಲು ನಗರಸಭೆಯಲ್ಲಿ ಆಗಿದ್ದ ಸೋಲಿಗೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮುಯ್ಯಿ ತೀರಿಸಿಕೊಂಡಿದ್ದೇವೆ ಎಂದು ಹೇಳಿದರು.</p>.<p>ಈಗಾಗಲೇ ಕೋಮುಲ್ ಚುನಾವಣೆಯ ಪೂರ್ವಕ್ಕೆ ಕಾಡೇನಹಳ್ಳಿ ನಾಗರಾಜ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಭಾನುವಾರ ನಗರದಲ್ಲಿ ಮುಖಂಡರ ಸಭೆ ಕರೆದು ಕೋಮುಲ್ ಪಶ್ಚಿಮ ಭಾಗದ ಅಭ್ಯರ್ಥಿಯನ್ನು ಘೋಷಿಸಲಾಗುವುದು ಎಂದು ಹೇಳಿದರು.</p>.<p>ನೂತನ ನಿರ್ದೇಶಕ ರಘುಪತಿ ರೆಡ್ಡಿ ಮಾತನಾಡಿ, ‘ಎಲ್ಲಾ ಮುಖಂಡರ ನಂಬಿಕೆ ಹಾಗೂ ತಾಲ್ಲೂಕಿನ ಮಹಿಳೆಯರ ಋಣ ತೀರಿಸುವೆ‘ ಎಂದು ಹೇಳಿದರು.</p>.<p>ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಶಿನಿಗೇನಹಳ್ಳಿ ಆನಂದ ರೆಡ್ಡಿ, ಬಿ.ಎಂ.ಸಿ ವೆಂಕಟರಾಮೇ ಗೌಡ, ಎಂ ಗೊಲ್ಲಹಳ್ಳಿ ಪ್ರಭಾಕರ್, ಎನ್ .ಆರ್.ಸತ್ಯ್ಯಣ್ಣ, ವರದರಾಜಪ್ಪ, ಭರತ್ ಆನಂದರೆಡ್ಡಿ, ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು</strong>: ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ತಾಲ್ಲೂಕು ನಿರ್ದೇಶಕರಾಗಿ ರಘುಪತಿ ರೆಡ್ಡಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.</p>.<p>ನಂತರ ನಗರದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸಮೃದ್ಧಿ ಮಂಜುನಾಥ್, ಮುಳಬಾಗಿಲು ನಗರಸಭೆಯಲ್ಲಿ ಆಗಿದ್ದ ಸೋಲಿಗೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮುಯ್ಯಿ ತೀರಿಸಿಕೊಂಡಿದ್ದೇವೆ ಎಂದು ಹೇಳಿದರು.</p>.<p>ಈಗಾಗಲೇ ಕೋಮುಲ್ ಚುನಾವಣೆಯ ಪೂರ್ವಕ್ಕೆ ಕಾಡೇನಹಳ್ಳಿ ನಾಗರಾಜ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಭಾನುವಾರ ನಗರದಲ್ಲಿ ಮುಖಂಡರ ಸಭೆ ಕರೆದು ಕೋಮುಲ್ ಪಶ್ಚಿಮ ಭಾಗದ ಅಭ್ಯರ್ಥಿಯನ್ನು ಘೋಷಿಸಲಾಗುವುದು ಎಂದು ಹೇಳಿದರು.</p>.<p>ನೂತನ ನಿರ್ದೇಶಕ ರಘುಪತಿ ರೆಡ್ಡಿ ಮಾತನಾಡಿ, ‘ಎಲ್ಲಾ ಮುಖಂಡರ ನಂಬಿಕೆ ಹಾಗೂ ತಾಲ್ಲೂಕಿನ ಮಹಿಳೆಯರ ಋಣ ತೀರಿಸುವೆ‘ ಎಂದು ಹೇಳಿದರು.</p>.<p>ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಶಿನಿಗೇನಹಳ್ಳಿ ಆನಂದ ರೆಡ್ಡಿ, ಬಿ.ಎಂ.ಸಿ ವೆಂಕಟರಾಮೇ ಗೌಡ, ಎಂ ಗೊಲ್ಲಹಳ್ಳಿ ಪ್ರಭಾಕರ್, ಎನ್ .ಆರ್.ಸತ್ಯ್ಯಣ್ಣ, ವರದರಾಜಪ್ಪ, ಭರತ್ ಆನಂದರೆಡ್ಡಿ, ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>