<p>ಕೋಲಾರ: ‘ಕವಿ ನಮನದ ಮೂಲಕ ನನಗೆ ನೀಡಿರುವ ಗೌರವವನ್ನು ಕವಿ ಹಾಗೂ ಲೇಖಕ ಸಮುದಾಯಕ್ಕೆ ಸಮರ್ಪಿಸುತ್ತೇನೆ’ ಎಂದು ಕವಿ ಹಾಗೂ ಲೇಖಕ ಆರ್.ಚೌಡರೆಡ್ಡಿ ತಿಳಿಸಿದರು.</p>.<p>‘ನಾನು ಬರೆದ ಕವಿತೆ, ಸಾಹಿತ್ಯವನ್ನು ಓದುತ್ತಿರುವ ಓದುಗರಿಗೆ ಚಿರಋಣಿ. ಶಿಶು ಗೀತೆಗಳನ್ನು ಮಕ್ಕಳು ಹಾಡಿ ಆನಂದಿಸುತ್ತಿದ್ದಾರೆ. ನಾನು ಬರೆದ ಸಾಹಿತ್ಯಕ್ಕೆ ಮೌಲ್ಯವಿದೆ. ಸಾಹಿತ್ಯ ಇತರರಿಗೆ ಸ್ಫೂರ್ತಿಯಾಗಿದೆ’ ಎಂದರು.<br />‘ಪ್ರತಿ ಮನುಷ್ಯನಿಗೂ ಸಾಧಿಸುವ ಹಂಬಲವಿರುತ್ತದೆ. ಎಲ್ಲರೊಡನೆ ಸೇರುವ ಸಾಹಿತ್ಯಕ್ಕೆ ಜೀವಂತಿಕೆಯಿರುತ್ತದೆ.</p>.<p>‘ಚೌಡರೆಡ್ಡಿ ಅವರ ಕವಿತೆ, ಲೇಖನಗಳಿಗೆ ಆ ಶಕ್ತಿಯಿದೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಅರ್ಹತೆ ಅವರಿಗಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅಭಿಪ್ರಾಯಪಟ್ಟರು.</p>.<p>‘ಚೌಡರೆಡ್ಡಿ ಅವರು ದೇಸಿಯ ಕವಿ ಕಾವ್ಯ ಕೃಷಿಕ. ಅವರು ಕವಿಯ ಒಳಗೆ ದೇಸಿತನ ಹಾಗೂ ತನ್ನತನ ಉಳಿಸಿಕೊಂಡವರು. ಈ ನೆಲದ ಬೇರು ಅವರ ಕವಿತೆ, ಲೇಖನಗಳಲ್ಲಿ ಉಸಿರಾಡುತ್ತಿದೆ. ಹೃದಯಕ್ಕೆ ಹತ್ತಿರವಾಗುವ, ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಬರೆದಿದ್ದಾರೆ. ಇಂತಹವರನ್ನು ಪ್ರಧಾನ ಧಾರೆಯಲ್ಲಿ ಗುರುತಿಸುವ ಕೆಲಸ ಆಗಬೇಕು’ ಎಂದು ಉಪನ್ಯಾಸಕ ಡಿ.ಎಸ್.ಶ್ರೀನಿವಾಸಪ್ರಸಾದ್ ಹೇಳಿದರು.</p>.<p>‘ಚೌಡರೆಡ್ಡಿ ಅವರದು ಮಾರ್ಗದರ್ಶಿ ವ್ಯಕ್ತಿತ್ವ. ಸ್ಥಿತಪ್ರಜ್ಞೆಯನ್ನು ಅವರಲ್ಲಿ ಕಂಡಿದ್ದೇನೆ. ಬಂದಿದ್ದನ್ನು ಬಂದಹಾಗೆ ಸ್ವೀಕರಿಸುವ ವ್ಯಕ್ತಿತ್ವ. ಅವರ ಕವಿತೆ, ಲೇಖನಗಳು ಓದುಗರನ್ನು ಸರಳವಾಗಿ ಓದಿಸಿ ಮನಸ್ಸಿಗೆ ಇಳಿಸುತ್ತವೆ’ ಎಂದು ಸಾಹಿತಿ ಮಾಯಾ ಬಾಲಚಂದ್ರ ಹೇಳಿದರು.</p>.<p>ಸಾಹಿತಿ ಎಂ.ನಾರಾಯಣಪ್ಪ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಯು.ವಿ.ನಾರಾಯಣಾಚಾರ್, ತಿಪ್ಪೇರಂಗಪ್ಪ, ಚಂದ್ರಪ್ಪ, ನಾ.ವೆಂಕಿ, ಶಂಕರೇಗೌಡ, ಪಿ.ವಿ.ಶ್ರೀನಿವಾಸ್, ಜಿ.ಸುಧಾಕರ್, ಡಿ.ರಾಜೇಶ್ವರಿ, ಎನ್.ಸಿ.ರಾಜೇಶ್ವರಿ, ವಿ.ರಾಧಾಕೃಷ್ಣ, ಎಂ.ನಾಗರಾಜ್, ಎಚ್.ಎಸ್.ಪುಷ್ಪಲತಾ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ: ‘ಕವಿ ನಮನದ ಮೂಲಕ ನನಗೆ ನೀಡಿರುವ ಗೌರವವನ್ನು ಕವಿ ಹಾಗೂ ಲೇಖಕ ಸಮುದಾಯಕ್ಕೆ ಸಮರ್ಪಿಸುತ್ತೇನೆ’ ಎಂದು ಕವಿ ಹಾಗೂ ಲೇಖಕ ಆರ್.ಚೌಡರೆಡ್ಡಿ ತಿಳಿಸಿದರು.</p>.<p>‘ನಾನು ಬರೆದ ಕವಿತೆ, ಸಾಹಿತ್ಯವನ್ನು ಓದುತ್ತಿರುವ ಓದುಗರಿಗೆ ಚಿರಋಣಿ. ಶಿಶು ಗೀತೆಗಳನ್ನು ಮಕ್ಕಳು ಹಾಡಿ ಆನಂದಿಸುತ್ತಿದ್ದಾರೆ. ನಾನು ಬರೆದ ಸಾಹಿತ್ಯಕ್ಕೆ ಮೌಲ್ಯವಿದೆ. ಸಾಹಿತ್ಯ ಇತರರಿಗೆ ಸ್ಫೂರ್ತಿಯಾಗಿದೆ’ ಎಂದರು.<br />‘ಪ್ರತಿ ಮನುಷ್ಯನಿಗೂ ಸಾಧಿಸುವ ಹಂಬಲವಿರುತ್ತದೆ. ಎಲ್ಲರೊಡನೆ ಸೇರುವ ಸಾಹಿತ್ಯಕ್ಕೆ ಜೀವಂತಿಕೆಯಿರುತ್ತದೆ.</p>.<p>‘ಚೌಡರೆಡ್ಡಿ ಅವರ ಕವಿತೆ, ಲೇಖನಗಳಿಗೆ ಆ ಶಕ್ತಿಯಿದೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಅರ್ಹತೆ ಅವರಿಗಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅಭಿಪ್ರಾಯಪಟ್ಟರು.</p>.<p>‘ಚೌಡರೆಡ್ಡಿ ಅವರು ದೇಸಿಯ ಕವಿ ಕಾವ್ಯ ಕೃಷಿಕ. ಅವರು ಕವಿಯ ಒಳಗೆ ದೇಸಿತನ ಹಾಗೂ ತನ್ನತನ ಉಳಿಸಿಕೊಂಡವರು. ಈ ನೆಲದ ಬೇರು ಅವರ ಕವಿತೆ, ಲೇಖನಗಳಲ್ಲಿ ಉಸಿರಾಡುತ್ತಿದೆ. ಹೃದಯಕ್ಕೆ ಹತ್ತಿರವಾಗುವ, ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಬರೆದಿದ್ದಾರೆ. ಇಂತಹವರನ್ನು ಪ್ರಧಾನ ಧಾರೆಯಲ್ಲಿ ಗುರುತಿಸುವ ಕೆಲಸ ಆಗಬೇಕು’ ಎಂದು ಉಪನ್ಯಾಸಕ ಡಿ.ಎಸ್.ಶ್ರೀನಿವಾಸಪ್ರಸಾದ್ ಹೇಳಿದರು.</p>.<p>‘ಚೌಡರೆಡ್ಡಿ ಅವರದು ಮಾರ್ಗದರ್ಶಿ ವ್ಯಕ್ತಿತ್ವ. ಸ್ಥಿತಪ್ರಜ್ಞೆಯನ್ನು ಅವರಲ್ಲಿ ಕಂಡಿದ್ದೇನೆ. ಬಂದಿದ್ದನ್ನು ಬಂದಹಾಗೆ ಸ್ವೀಕರಿಸುವ ವ್ಯಕ್ತಿತ್ವ. ಅವರ ಕವಿತೆ, ಲೇಖನಗಳು ಓದುಗರನ್ನು ಸರಳವಾಗಿ ಓದಿಸಿ ಮನಸ್ಸಿಗೆ ಇಳಿಸುತ್ತವೆ’ ಎಂದು ಸಾಹಿತಿ ಮಾಯಾ ಬಾಲಚಂದ್ರ ಹೇಳಿದರು.</p>.<p>ಸಾಹಿತಿ ಎಂ.ನಾರಾಯಣಪ್ಪ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಯು.ವಿ.ನಾರಾಯಣಾಚಾರ್, ತಿಪ್ಪೇರಂಗಪ್ಪ, ಚಂದ್ರಪ್ಪ, ನಾ.ವೆಂಕಿ, ಶಂಕರೇಗೌಡ, ಪಿ.ವಿ.ಶ್ರೀನಿವಾಸ್, ಜಿ.ಸುಧಾಕರ್, ಡಿ.ರಾಜೇಶ್ವರಿ, ಎನ್.ಸಿ.ರಾಜೇಶ್ವರಿ, ವಿ.ರಾಧಾಕೃಷ್ಣ, ಎಂ.ನಾಗರಾಜ್, ಎಚ್.ಎಸ್.ಪುಷ್ಪಲತಾ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>