<p><strong>ಮಾಲೂರು: </strong>ವಿಶ್ವಕರ್ಮ ಸಮುದಾಯದವರು ಮಕ್ಕಳ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ಸಾಮಾಜಿಕ, ಆರ್ಥಿಕ ಪ್ರಗತಿ ಸಾಧ್ಯ ಎಂದು ವಿಶ್ವಕರ್ಮ ಸಂಘದ ಖಜಾಂಚಿ ಮುನೇಶ್ವರಚಾರಿ ಹೇಳಿದರು.</p>.<p>ಪಟ್ಟಣದ ಮಾರುತಿ ಬಡಾವಣೆಯ ಸಂಘದ ಕಚೇರಿಯಲ್ಲಿ ತಾಲ್ಲೂಕು ವಿಶ್ವಕರ್ಮ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು.</p>.<p>ಸಮುದಾಯವು ದೇವರ ವಿಗ್ರಹಗಳಿಗೆ ರೂಪ ನೀಡಿ, ಧೈವಭಕ್ತಿ ರೂಪಿಸುವ ಮಹತ್ವ ಕಾರ್ಯದಲ್ಲಿ ನಿರತವಾಗಿದೆ ಎಂದರು.</p>.<p>ಸಮುದಾಯದ 8 ಮಹಿಳಾ ಸ್ವಸಹಾಯ ಸಂಘಗಳಿಗೆ ಡಿಸಿಸಿ ಬ್ಯಾಂಕ್ನಿಂದ ಪ್ರತಿ ಸಂಘಕ್ಕೆ ತಲಾ ₹ 5 ಲಕ್ಷ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ ಎಂದರು.</p>.<p>ಸಾಲ ಪಡೆದ ಸಂಘದ ಪ್ರತಿನಿಧಿಗಳು ಹಣವನ್ನು ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಉಪಯೋಗಿಸಿಕೊಂಡು ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದರು.</p>.<p>ಸಮುದಾಯದ ಬಡ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಹಸುಗಳನ್ನು ನೀಡಿದ್ದು, ಇದರಿಂದ ಅವರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ ಎಂದರು.</p>.<p>ಸಂಘದ ಗೌರವಾಧ್ಯಕ್ಷ ಚಿಕ್ಕತಿರುಪತಿ ಶ್ರೀಧರಾಚಾರ್, ಕಾರ್ಯಧ್ಯಕ್ಷ ಜಗನ್ನಾಥ್ ಚಾರಿ, ಅಧ್ಯಕ್ಷ ಕೃಷ್ಣಚಾರಿ, ಪ್ರಧಾನ ಕಾರ್ಯದರ್ಶಿ ಕೋಡಿಹಳ್ಳಿ ಚಂದ್ರಶೇಖರ್, ನಗರಾಧ್ಯಕ್ಷ ಶಿವಣ್ಣ, ಮಹದೇವ ಪಾಂಚಲ್, ಪುರುಷೋತ್ತಮಚಾರಿ, ಮೋಹನ್, ವೀರಭದ್ರಚಾರಿ, ಗೌರಿಶಂಕರ್, ಕೆ.ವಿ.ಗಿರಿ, ನಂಜುಂಡಚಾರಿ, ಅಮರೇಶಾಚಾರಿ, ರವಿಶಂಕರಾಚಾರಿ, ಟಿ.ಎನ್.ಜಗದೀಶ್, ಅಂಜನೇಯಚಾರಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಲೂರು: </strong>ವಿಶ್ವಕರ್ಮ ಸಮುದಾಯದವರು ಮಕ್ಕಳ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ಸಾಮಾಜಿಕ, ಆರ್ಥಿಕ ಪ್ರಗತಿ ಸಾಧ್ಯ ಎಂದು ವಿಶ್ವಕರ್ಮ ಸಂಘದ ಖಜಾಂಚಿ ಮುನೇಶ್ವರಚಾರಿ ಹೇಳಿದರು.</p>.<p>ಪಟ್ಟಣದ ಮಾರುತಿ ಬಡಾವಣೆಯ ಸಂಘದ ಕಚೇರಿಯಲ್ಲಿ ತಾಲ್ಲೂಕು ವಿಶ್ವಕರ್ಮ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು.</p>.<p>ಸಮುದಾಯವು ದೇವರ ವಿಗ್ರಹಗಳಿಗೆ ರೂಪ ನೀಡಿ, ಧೈವಭಕ್ತಿ ರೂಪಿಸುವ ಮಹತ್ವ ಕಾರ್ಯದಲ್ಲಿ ನಿರತವಾಗಿದೆ ಎಂದರು.</p>.<p>ಸಮುದಾಯದ 8 ಮಹಿಳಾ ಸ್ವಸಹಾಯ ಸಂಘಗಳಿಗೆ ಡಿಸಿಸಿ ಬ್ಯಾಂಕ್ನಿಂದ ಪ್ರತಿ ಸಂಘಕ್ಕೆ ತಲಾ ₹ 5 ಲಕ್ಷ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ ಎಂದರು.</p>.<p>ಸಾಲ ಪಡೆದ ಸಂಘದ ಪ್ರತಿನಿಧಿಗಳು ಹಣವನ್ನು ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಉಪಯೋಗಿಸಿಕೊಂಡು ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದರು.</p>.<p>ಸಮುದಾಯದ ಬಡ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಹಸುಗಳನ್ನು ನೀಡಿದ್ದು, ಇದರಿಂದ ಅವರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ ಎಂದರು.</p>.<p>ಸಂಘದ ಗೌರವಾಧ್ಯಕ್ಷ ಚಿಕ್ಕತಿರುಪತಿ ಶ್ರೀಧರಾಚಾರ್, ಕಾರ್ಯಧ್ಯಕ್ಷ ಜಗನ್ನಾಥ್ ಚಾರಿ, ಅಧ್ಯಕ್ಷ ಕೃಷ್ಣಚಾರಿ, ಪ್ರಧಾನ ಕಾರ್ಯದರ್ಶಿ ಕೋಡಿಹಳ್ಳಿ ಚಂದ್ರಶೇಖರ್, ನಗರಾಧ್ಯಕ್ಷ ಶಿವಣ್ಣ, ಮಹದೇವ ಪಾಂಚಲ್, ಪುರುಷೋತ್ತಮಚಾರಿ, ಮೋಹನ್, ವೀರಭದ್ರಚಾರಿ, ಗೌರಿಶಂಕರ್, ಕೆ.ವಿ.ಗಿರಿ, ನಂಜುಂಡಚಾರಿ, ಅಮರೇಶಾಚಾರಿ, ರವಿಶಂಕರಾಚಾರಿ, ಟಿ.ಎನ್.ಜಗದೀಶ್, ಅಂಜನೇಯಚಾರಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>