ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮುನಿಯಪ್ಪ ಅವರಿಗೆ ಟಿಕೆಟ್ ಕೊಡುವ ಬಗ್ಗೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಒಟ್ಟಾಗಿ ಸರ್ವಾನುಮತದಿಂದ ನನ್ನನ್ನು ಸ್ಪೀಕರ್ ಮಾಡಿದ್ದಾರೆ. ನಾನು ಜಡ್ಜ್ ಇದ್ದಂತೆ. ಯಾರಿಗೂ ಸಹಮತವಿಲ್ಲ, ಭಿನ್ನಮತನೂ ಇಲ್ಲ. ಪಕ್ಷದಲ್ಲಿರುವವರು ಟಿಕೆಟ್ ಬಗ್ಗೆ ತೀರ್ಮಾನಿಸುತ್ತಾರೆ. ನನ್ನ ಮನಸ್ಸಿನಲ್ಲಿರುವುದನ್ನು ಹೇಳುವುದಕ್ಕೆ ಆಗುವುದಿಲ್ಲ’ ಎಂದು ತಿಳಿಸಿದರು.