<p><strong>ಮುಳಬಾಗಿಲು: </strong>ದೇವರಾಯ ಸಮುದ್ರದಿಂದ ಕೀಲುಹೊಳಲ್ಲಿ ಮತ್ತು ದೇವರಾಯಸಮುದ್ರದಿಂದ ಪಿಚ್ಚಗುಂಟ್ಲಹಳ್ಳಿ, ಯಳಗೊಂಡ್ಲಹಳ್ಳಿ ಕ್ರಾಸ್ವರೆವಿಗೂ ರಸ್ತೆ ಡಾಂಬರೀಕರಣಕ್ಕೆ ತಲಾ ₹ 3 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕ ಎಚ್. ನಾಗೇಶ್ ತಿಳಿಸಿದರು.</p>.<p>ತಾಲ್ಲೂಕಿನ ಊರುಕುಂಟೆ ಮಿಟ್ಟೂರು ಗ್ರಾ.ಪಂ ವ್ಯಾಪ್ತಿಯ ಮಿಣಜೇನಹಳ್ಳಿಯಲ್ಲಿ ಭಾನುವಾರ ₹ 5 ಲಕ್ಷ ವೆಚ್ಚದಡಿ ನಿರ್ಮಿಸಲಿರುವ ಹೈಮಾಸ್ಟ್ ದೀಪ ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>ಪಿಚ್ಚಗುಂಟ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಶಾಲಾ ಮಕ್ಕಳು ತಮ್ಮ ಗ್ರಾಮದಿಂದ ಮುಖ್ಯರಸ್ತೆ ಸೇರಲು ರಸ್ತೆ ಸರಿ ಇಲ್ಲ. ಇದರಿಂದ ವಾಹನಗಳು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದಿಂದ ಸಂಪರ್ಕ ಕಲ್ಲಿಸುವ ರಸ್ತೆವರೆವಿಗೂ ಸುಮಾರು ಒಂದು ಕಿ.ಮೀ ವರೆವಿಗೂ ರಸ್ತೆ ನಿರ್ಮಿಸಲಾಗುತ್ತಿದೆ ಎಂದು<br />ತಿಳಿಸಿದರು.</p>.<p>ಇನ್ನು ಉಳಿದಿರುವ ಎರಡು ವರ್ಷಗಳಲ್ಲಿ ತಾಲ್ಲೂಕಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಅವಶ್ಯವಿರುವ ಮೂಲಸೌಲಭ್ಯ ಒದಗಿಸಲು ಶ್ರಮಿಸಲಾಗುವುದು ಎಂದುಹೇಳಿದರು.</p>.<p>ಮುಖಂಡರಾದ ಮಿಣಜೇನಹಳ್ಳಿ ಬಾಲಕೃಷ್ಣಸ್ವಾಮಿ, ಚಲಪತಿ ನಾಗರಾಜ್, ಆವಣಿ ವಿಜಿ, ಪೆದ್ದಪ್ಪಯ್ಯ, ಎಂ.ಎನ್. ವಾಸುದೇವ್, ಕೋಳಿ ನಾಗರಾಜ್, ಗ್ರಾ.ಪಂ. ಸದಸ್ಯ ವಿಶ್ವನಾಥ್, ವೆಂಕಟರಾಮ್, ಕೊತ್ತೂರು ರಾಜೇಂದ್ರಪ್ರಸಾದ್, ಚನ್ನಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು: </strong>ದೇವರಾಯ ಸಮುದ್ರದಿಂದ ಕೀಲುಹೊಳಲ್ಲಿ ಮತ್ತು ದೇವರಾಯಸಮುದ್ರದಿಂದ ಪಿಚ್ಚಗುಂಟ್ಲಹಳ್ಳಿ, ಯಳಗೊಂಡ್ಲಹಳ್ಳಿ ಕ್ರಾಸ್ವರೆವಿಗೂ ರಸ್ತೆ ಡಾಂಬರೀಕರಣಕ್ಕೆ ತಲಾ ₹ 3 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕ ಎಚ್. ನಾಗೇಶ್ ತಿಳಿಸಿದರು.</p>.<p>ತಾಲ್ಲೂಕಿನ ಊರುಕುಂಟೆ ಮಿಟ್ಟೂರು ಗ್ರಾ.ಪಂ ವ್ಯಾಪ್ತಿಯ ಮಿಣಜೇನಹಳ್ಳಿಯಲ್ಲಿ ಭಾನುವಾರ ₹ 5 ಲಕ್ಷ ವೆಚ್ಚದಡಿ ನಿರ್ಮಿಸಲಿರುವ ಹೈಮಾಸ್ಟ್ ದೀಪ ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>ಪಿಚ್ಚಗುಂಟ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಶಾಲಾ ಮಕ್ಕಳು ತಮ್ಮ ಗ್ರಾಮದಿಂದ ಮುಖ್ಯರಸ್ತೆ ಸೇರಲು ರಸ್ತೆ ಸರಿ ಇಲ್ಲ. ಇದರಿಂದ ವಾಹನಗಳು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದಿಂದ ಸಂಪರ್ಕ ಕಲ್ಲಿಸುವ ರಸ್ತೆವರೆವಿಗೂ ಸುಮಾರು ಒಂದು ಕಿ.ಮೀ ವರೆವಿಗೂ ರಸ್ತೆ ನಿರ್ಮಿಸಲಾಗುತ್ತಿದೆ ಎಂದು<br />ತಿಳಿಸಿದರು.</p>.<p>ಇನ್ನು ಉಳಿದಿರುವ ಎರಡು ವರ್ಷಗಳಲ್ಲಿ ತಾಲ್ಲೂಕಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಅವಶ್ಯವಿರುವ ಮೂಲಸೌಲಭ್ಯ ಒದಗಿಸಲು ಶ್ರಮಿಸಲಾಗುವುದು ಎಂದುಹೇಳಿದರು.</p>.<p>ಮುಖಂಡರಾದ ಮಿಣಜೇನಹಳ್ಳಿ ಬಾಲಕೃಷ್ಣಸ್ವಾಮಿ, ಚಲಪತಿ ನಾಗರಾಜ್, ಆವಣಿ ವಿಜಿ, ಪೆದ್ದಪ್ಪಯ್ಯ, ಎಂ.ಎನ್. ವಾಸುದೇವ್, ಕೋಳಿ ನಾಗರಾಜ್, ಗ್ರಾ.ಪಂ. ಸದಸ್ಯ ವಿಶ್ವನಾಥ್, ವೆಂಕಟರಾಮ್, ಕೊತ್ತೂರು ರಾಜೇಂದ್ರಪ್ರಸಾದ್, ಚನ್ನಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>