<p><strong>ಶ್ರೀನಿವಾಸಪುರ:</strong> ಅರಣ್ಯ ಇಲಾಖೆಯು ರೈತರ ಭೂಮಿ ಕಿತ್ತುಕೊಂಡರೆ ನಾವು ಬೀದಿಗೆ ಬರುತ್ತೇವೆ. ರೈತರ ಸಮಸ್ಯೆಯನ್ನ ಆಲಿಸಿ, ಈಗಾಗಲೇ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಜೊತೆ ಮಾತನಾಡಿದ್ದೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.</p><p>ತಾಲ್ಲೂಕಿನ ದೊಡಮಲದೊಡ್ಡಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ರೈತರ ಸಮಸ್ಯೆಗಳ ಆಲಿಸಿ ಮಾತನಾಡಿದರು.</p><p>ರೈತರಿಗೆ ತೊಂದರೆ ಕೊಟ್ಟರೆ ವಿಧಾನಸೌಧ ಮುತ್ತಿಗೆ ಹಾಕಲು ಸಿದ್ಧರಿದ್ದೇವೆ. ತಮಗೆ ತೊಂದರೆಯಾದರೆ ನಾವು ಇಲ್ಲಿಗೆ ಬರುತ್ತೇವೆ ಎಂದು ಆಶ್ವಾಸನೆ ನೀಡಿದರು.</p><p>ಇಡೀ ರಾಜ್ಯದ ಸಮಸ್ಯೆ ಇದಾಗಿದ್ದು, ಈಗಾಗಲೇ ರೈತರ ಭೂಮಿಯನ್ನು ಅರಣ್ಯ ಇಲಾಖೆ ಸಿಮೆಂಟ್ ದಿಂಬುಗಳನ್ನು ನಾಟಿ ಮಾಡಿರುವ ಬಗ್ಗೆ ರೈತರು ಮಾಹಿತಿ ನೀಡಿದರು. ಆಗ ಶಾಸಕರು ಅದನ್ನು ಕಾಲಕ್ರಮೇಣ ತೆಗೆಯಿರಿ ಎಂದು ಸಲಹೆ<br>ನೀಡಿದರು.</p><p>ಮುಖಂಡರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಲಕ್ಷಮಣರೆಡ್ಡಿ, ಡಿಎಸ್ಆರ್ ಶ್ರೀನಾಥರೆಡ್ಡಿ, ಆರಿಕುಂಟೆ ವೆಂಕಟರೆಡ್ಡಿ, ಡಿ.ವಿ.ಶ್ರೀನಿವಾಸರೆಡ್ಡಿ, ಬೈರೆಡ್ಡಿ, ಯಶ್ವವಂತ್, ಮನು, ಡಿ.ಎಲ್.ವೆಂಕಟರೆಡ್ಡಿ, ಮನೋಹರ್, ನಾರಾಯಣಸ್ವಾಮಿ, ಶಾಂತಮ್ಮ, ಲಾವಣ್ಯ, ರಾಮಲಕ್ಷ್ಮಮ್ಮ, ಲಕ್ಷ್ಮಿದೇವಮ್ಮ ಹಾಗೂ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಿವಾಸಪುರ:</strong> ಅರಣ್ಯ ಇಲಾಖೆಯು ರೈತರ ಭೂಮಿ ಕಿತ್ತುಕೊಂಡರೆ ನಾವು ಬೀದಿಗೆ ಬರುತ್ತೇವೆ. ರೈತರ ಸಮಸ್ಯೆಯನ್ನ ಆಲಿಸಿ, ಈಗಾಗಲೇ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಜೊತೆ ಮಾತನಾಡಿದ್ದೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.</p><p>ತಾಲ್ಲೂಕಿನ ದೊಡಮಲದೊಡ್ಡಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ರೈತರ ಸಮಸ್ಯೆಗಳ ಆಲಿಸಿ ಮಾತನಾಡಿದರು.</p><p>ರೈತರಿಗೆ ತೊಂದರೆ ಕೊಟ್ಟರೆ ವಿಧಾನಸೌಧ ಮುತ್ತಿಗೆ ಹಾಕಲು ಸಿದ್ಧರಿದ್ದೇವೆ. ತಮಗೆ ತೊಂದರೆಯಾದರೆ ನಾವು ಇಲ್ಲಿಗೆ ಬರುತ್ತೇವೆ ಎಂದು ಆಶ್ವಾಸನೆ ನೀಡಿದರು.</p><p>ಇಡೀ ರಾಜ್ಯದ ಸಮಸ್ಯೆ ಇದಾಗಿದ್ದು, ಈಗಾಗಲೇ ರೈತರ ಭೂಮಿಯನ್ನು ಅರಣ್ಯ ಇಲಾಖೆ ಸಿಮೆಂಟ್ ದಿಂಬುಗಳನ್ನು ನಾಟಿ ಮಾಡಿರುವ ಬಗ್ಗೆ ರೈತರು ಮಾಹಿತಿ ನೀಡಿದರು. ಆಗ ಶಾಸಕರು ಅದನ್ನು ಕಾಲಕ್ರಮೇಣ ತೆಗೆಯಿರಿ ಎಂದು ಸಲಹೆ<br>ನೀಡಿದರು.</p><p>ಮುಖಂಡರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಲಕ್ಷಮಣರೆಡ್ಡಿ, ಡಿಎಸ್ಆರ್ ಶ್ರೀನಾಥರೆಡ್ಡಿ, ಆರಿಕುಂಟೆ ವೆಂಕಟರೆಡ್ಡಿ, ಡಿ.ವಿ.ಶ್ರೀನಿವಾಸರೆಡ್ಡಿ, ಬೈರೆಡ್ಡಿ, ಯಶ್ವವಂತ್, ಮನು, ಡಿ.ಎಲ್.ವೆಂಕಟರೆಡ್ಡಿ, ಮನೋಹರ್, ನಾರಾಯಣಸ್ವಾಮಿ, ಶಾಂತಮ್ಮ, ಲಾವಣ್ಯ, ರಾಮಲಕ್ಷ್ಮಮ್ಮ, ಲಕ್ಷ್ಮಿದೇವಮ್ಮ ಹಾಗೂ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>