ಪೊಲೀಸ್ ಠಾಣಾ ಆವರಣದಲ್ಲಿ ವೆಂಕಟರಾಜು ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಪಿಎಸ್ಐ ಎನ್. ಅನಿಲ್ಕುಮಾರ್, ‘ವೆಂಕಟರಾಜು ಅವರು ಶಿಸ್ತು, ಸಂಯಮಕ್ಕೆ ಹೆಸರಾಗಿದ್ದರು. ಸಾರ್ವಜನಿಕರೊಂದಿಗೆ ಸಮಾಧಾನದಿಂದ ಮಾತನಾಡುತ್ತಿದ್ದ ಅವರ ಕಾರ್ಯವೈಖರಿ ಎಲ್ಲರಿಗೂ ಮಾದರಿಯಾಗಿದೆ. ನಿವೃತ್ತಿ ಎಂಬುದು ಅನಿವಾರ್ಯ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ’ ಎಂದು ಹಾರೈಸಿದರು.