ಅನುಕಂಪದ ಆಧಾರದ ಮೇಲೆ ಕುಟುಂಬದವರಿಗೆ ಕೆಲಸ ಕೊಡಬೇಕು ಎಂಬ ಸರ್ಕಾರಿ ಆದೇಶವಾಗಿದೆ. ಅದನ್ನು ಜಾರಿಗೆ ತರಬೇಕು. 2017 ರಕ್ಕೂ ಮುನ್ನ ತಾಲ್ಲೂಕಿನಲ್ಲಿ 246 ಪಂಚಾಯಿತಿ ನೌಕರರು ಇದ್ದರು. ಅವರಲ್ಲಿ ಬಹುತೇಕ ಮಂದಿಗೆ ವಿದ್ಯಾರ್ಹತೆ ಇಲ್ಲ ಎಂದು ಸರ್ಕಾರ ಅರ್ಹತೆಗೆಪರಿಗಣಿಸಿಲ್ಲ. ವಿದ್ಯಾರ್ಥತೆ ಇಲ್ಲದಿದ್ದರೂ ಅನುಭವದ ಮೇಲೆ ಆದ್ಯತೆ ನೀಡಬೇಕು ಎಂದು ಸರ್ಕಾರಿ ಆದೇಶ ಇದೆ. ಅದನ್ನು ಜಾರಿಗೆ ತರಬೇಕು ಎಂದು ತಾಲ್ಲೂಕು ಅಧ್ಯಕ್ಷ ರಾಮಕೃಷ್ಣ ಒತ್ತಾಯಿಸಿದರು.