<p><strong>ಬೇತಮಂಗಲ:</strong> ಸಮೀಪದ ಸುಂದರಪಾಳ್ಯ ಗ್ರಾಮದಲ್ಲಿ ಆರ್ಎಸ್ಎಸ್ ವತಿಯಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಮಂಗಳವಾರ ನಡೆಯಿತು.</p>.<p>ಈ ವೇಳೆ ಮಾಜಿ ಸಂಸದ ಎಸ್.ಮುಮಿಸ್ವಾಮಿ ಮಾತನಾಡಿ, ಸನಾತನ ಹಿಂದೂ ಧರ್ಮ ಯಾವುದೇ ಮತ ಮತ್ತು ಪಂಗಡಗಳಿಗೆ ಸೀಮಿತವಲ್ಲ. ಆರ್ಎಸ್ಎಸ್ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿಲ್ಲ ಎಂದರು.</p>.<p>ಪ್ರಸ್ತುತ ಜಾತ್ಯತೀತ ಹೆಸರಿನಲ್ಲಿ ಧರ್ಮ ಬೇಡ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಆದರೆ, ಅವು ಶಾಶ್ವತವಲ್ಲ. ಧರ್ಮ ಆಧಾರದ ಮೇಲೆ ನಡೆಯುವ ಸಂಘಟನೆಗೆ ಸಾರ್ವಜನಿಕರ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.</p>.<p>ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಸಂಘಟನೆ ಹೆಸರಿನಲ್ಲಿ ಧರ್ಮದ ರಕ್ಷಣೆ ಮಡುವುದು ಇಂದಿನ ತುರ್ತು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.</p>.<p>ಹಿಂದೂ ಸಮಾಜೋತ್ಸವದ ಅಂಗವಾಗಿ ನಗರ ಕೇಸರಿಮಯವಾಗಿತ್ತು. ವೆಂಕಟಾಚಲಪತಿ, ಆಂಧ್ರಪ್ರದೇಶ ಭರತ್, ಜಯ ಪ್ರಕಾಶನಾಯ್ಡು, ಮೋಹನ್ ಕೃಷ್ಣ, ಲಕ್ಷ್ಮಿನಾರಾಯಣ, ನವೀನ್ ರಾಮ್, ಚಂದ್ರಕುಮಾರ್, ಸುನೀಲ್ ಕುಮಾರ್, ಹುನುಮಂತಪ್ಪ, ಮಲ್ಲಹಳ್ಳಿ ವೆಂಕಟಾಚಲಪತಿ, ಮಂಜುನಾಥ್, ಉದಯಕುಮಾರ್ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇತಮಂಗಲ:</strong> ಸಮೀಪದ ಸುಂದರಪಾಳ್ಯ ಗ್ರಾಮದಲ್ಲಿ ಆರ್ಎಸ್ಎಸ್ ವತಿಯಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಮಂಗಳವಾರ ನಡೆಯಿತು.</p>.<p>ಈ ವೇಳೆ ಮಾಜಿ ಸಂಸದ ಎಸ್.ಮುಮಿಸ್ವಾಮಿ ಮಾತನಾಡಿ, ಸನಾತನ ಹಿಂದೂ ಧರ್ಮ ಯಾವುದೇ ಮತ ಮತ್ತು ಪಂಗಡಗಳಿಗೆ ಸೀಮಿತವಲ್ಲ. ಆರ್ಎಸ್ಎಸ್ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿಲ್ಲ ಎಂದರು.</p>.<p>ಪ್ರಸ್ತುತ ಜಾತ್ಯತೀತ ಹೆಸರಿನಲ್ಲಿ ಧರ್ಮ ಬೇಡ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಆದರೆ, ಅವು ಶಾಶ್ವತವಲ್ಲ. ಧರ್ಮ ಆಧಾರದ ಮೇಲೆ ನಡೆಯುವ ಸಂಘಟನೆಗೆ ಸಾರ್ವಜನಿಕರ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.</p>.<p>ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಸಂಘಟನೆ ಹೆಸರಿನಲ್ಲಿ ಧರ್ಮದ ರಕ್ಷಣೆ ಮಡುವುದು ಇಂದಿನ ತುರ್ತು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.</p>.<p>ಹಿಂದೂ ಸಮಾಜೋತ್ಸವದ ಅಂಗವಾಗಿ ನಗರ ಕೇಸರಿಮಯವಾಗಿತ್ತು. ವೆಂಕಟಾಚಲಪತಿ, ಆಂಧ್ರಪ್ರದೇಶ ಭರತ್, ಜಯ ಪ್ರಕಾಶನಾಯ್ಡು, ಮೋಹನ್ ಕೃಷ್ಣ, ಲಕ್ಷ್ಮಿನಾರಾಯಣ, ನವೀನ್ ರಾಮ್, ಚಂದ್ರಕುಮಾರ್, ಸುನೀಲ್ ಕುಮಾರ್, ಹುನುಮಂತಪ್ಪ, ಮಲ್ಲಹಳ್ಳಿ ವೆಂಕಟಾಚಲಪತಿ, ಮಂಜುನಾಥ್, ಉದಯಕುಮಾರ್ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>