ಇದಕ್ಕೆ ಧ್ವನಿಗೂಡಿಸಿದ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ‘ದಿನಕ್ಕೆ ಇಂತಿಷ್ಟು ಮದ್ಯ ಮಾರಾಟವಾಗಲೇ ಬೇಕೆಂದು ಬಾರ್ ಮಾಲೀಕರಿಗೆ ಸರ್ಕಾರವೇ ಗುರಿ ನೀಡಿದೆ. ಇದರಿಂದ ಮಾಲೀಕರು ಗ್ರಾಮೀಣ ಭಾಗದ ಚಿಲ್ಲರೆ ಅಂಗಡಿಯವರಿಗೆ ಮದ್ಯ ಕೊಟ್ಟು ಮಾರಾಟ ಮಾಡಿಸುತ್ತಿದ್ದಾರೆ. ಇದರಿಂದ ಜನರಿಗೆ ಎಷ್ಟು ತೊಂದರೆಯಾಗುತ್ತಿದೆ ಎಂಬ ಆಲೋಚನೆಯಿಲ್ಲ’ ಎಂದು ದೂರಿದರು.