‘ಈ ಹಿಂದೆ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಕೆ. ಚಂದ್ರಮೌಳೇಶ್ವರ ನಮಗೆ ಜಮೀನು ಮಂಜೂರು ಮಾಡಿದ್ದರು. ಅವರ ಕೊಲೆಯಾದ ಬಳಿಕ ಬಂಗಾರಪೇಟೆ ತಹಶೀಲ್ದಾರ್ ಆಗಿ ಪ್ರಭಾರವಹಿಸಿಕೊಂಡಿದ್ದ ಕೆಜಿಎಫ್ ತಹಶೀಲ್ದಾರ್ ಕೆ. ರಮೇಶ್ ಅವರು ಹಿಂದಿನ ತಹಶೀಲ್ದಾರ್ ಆದೇಶದಂತೆ ಪಹಣಿಯಲ್ಲಿ ಹೆಸರು ನಮೂದಿಸಿ ಎಂದು ಆದೇಶ ಮಾಡಿದ್ದರು. ಕೂಡಲೇ ದಾಖಲೆ ಪತ್ರ ನೀಡಬೇಕು ಎಂದು ಕೋರಿದರು.