‘ಕ್ರೀಡಾಪಟುಗಳ ಸಣ್ಣ ಸಾಧನೆ ಗುರುತಿಸುವುದು ಮುಖ್ಯ. ಏಕೆಂದರೆ ಯಾವುದೇ ಕ್ರೀಡಾಪಟುವಿನ ಸಾಧನೆ ಹಿಂದೆ ಬಹಳ ವರ್ಷಗಳ ಶ್ರಮವಿರುತ್ತದೆ.ಏಕಾಏಕಿ ಪದಕ ಗೆಲ್ಲಲು ಸಾಧ್ಯವಾಗುವುದಿಲ್ಲ. ಈ ಪ್ರಶಸ್ತಿಗೆ ನಾನು ಅರ್ಜಿ ಸಲ್ಲಿಸಿರಲಿಲ್ಲ. ಸರ್ಕಾರವೇ ನನ್ನ ಸಾಧನೆ ಗುರುತಿಸಿದ್ದು ಖುಷಿ ನೀಡಿದೆ’ ಎಂದು ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.