ವರದಿ – ಕೃಷ್ಣಮೂರ್ತಿ
ಕೆಜಿಎಫ್: ಅತಿ ಕಡಿಮೆ ವೆಚ್ಚದಲ್ಲಿ ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿ, ಅವರ ಸ್ವಂತಕ್ಕೆ ನೀಡಿದ ನಗರಸಭೆ ರಾಜ್ಯದಲ್ಲಿ ಹೊಸ ಮುನ್ನುಡಿ ಬರೆದಿದೆ.
ನಗರದ ಹೊರವಲಯದ ಸೂರಪಲ್ಲಿ ಗ್ರಾಮದಲ್ಲಿ ನಿರ್ಮಾಣ ಮಾಡಲಾದ ಎರಡು ಅಂತಸ್ತಿನ 59 ಮನೆಗಳ ಸಮುಚ್ಚಯವನ್ನು ಈಚೆಗೆ ಪೌರಕಾರ್ಮಿಕರಿಗೆ ಹಸ್ತಾಂತರಿಸಲಾಯಿತು.
ಗೃಹಭಾಗ್ಯ ಯೋಜನೆಯಡಿ ಈ ಮನೆಗಳ ನಿರ್ಮಾಣಕ್ಕೆ ನಾಲ್ಕು ವರ್ಷಗಳ ಹಿಂದೆ ಚಾಲನೆ ನೀಡಲಾಗಿತ್ತು. ಮೊದ ಮೊದಲು ನಗರದಿಂದ ಹೊರಭಾಗದಲ್ಲಿರುವ ಸೂರಪಲ್ಲಿಗೆ ಹೋಗಲು ಪೌರಕಾರ್ಮಿಕರು ಹಿಂದೇಟು ಹಾಕಿದರು. ಆದರೆ ಅಲ್ಲಿನ ಮೂಲಭೂತ ಸೌಕರ್ಯ ಮತ್ತು ಇತರ ಪ್ರಯೋಜನಗಳನ್ನು ಕಂಡು, ಅಲ್ಲಿಗೆ ಸ್ಥಳಾಂತರವಾಗಲು ನಿರ್ಧರಿಸಿದರು.
ಎಲ್ಲಾ ಮನೆಗಳ ಮುಂದೆ ವಿಸ್ತಾರವಾದ ಸಿಮೆಂಟ್ ರಸ್ತೆ, ಸದಾ ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ಉದ್ಯಾನ ಮುಂತಾದ ಮೂಲಭೂತ ಸೌಕರ್ಯಗಳನ್ನು ವಸತಿ ಸಮುಚ್ಚಯ ಹೊಂದಿದೆ.
ಮನೆಗಳಿಗೆ ಪೌರಕಾರ್ಮಿಕರ ಜೊತೆ ಡಿ ಗ್ರೂಪ್ ನೌಕರರಿಂದಲೂ ಬೇಡಿಕೆ ಬಂದಿದ್ದು, ಆಶ್ರಯ ಬಡಾವಣೆಯಲ್ಲಿ ಅವರಿಗೂ ನಿವೇಶನ ನೀಡಿ, ಮನೆ ಕಟ್ಟಿಕೊಳ್ಳಲು ಅನುವು ಮಾಡಿಕೊಡಲಾಗುವುದು ಎಂದು ಶಾಸಕಿ ರೂಪಕಲಾ ಈಗಾಗಲೇ ಆಶ್ವಾಸನೆ ನೀಡಿದ್ದಾರೆ.
ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿರುವುದು ರಾಜ್ಯದಲ್ಲಿಯೇ ಇದೇ ಪ್ರಥಮ.ಎಂ.ರೂಪಕಲಾ ಶಾಸಕಿ
ಯಾವುದೇ ಮೂಲಭೂತ ಸೌಕರ್ಯ ಇಲ್ಲದ ಮನೆಗಳಿಂದ ಇಲ್ಲಿಗೆ ಸ್ಥಳಾಂತರವಾಗಿದ್ದು ಖುಷಿ ತಂದಿದೆರಾಜಾ ಪೌರಕಾರ್ಮಿಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.