ವೇಮಗಲ್ (ಕೋಲಾರ): ವೇಮಗಲ್ ಹೋಬಳಿ ಮಾದಿಗ ಸಮುದಾಯದ ಮುಖಂಡರ ತುರ್ತು ಸಭೆಯನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.
‘ಸದಾಶಿವ ಆಯೋಗ ವರದಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಅನುಷ್ಠಾನಕ್ಕೆ ಆಗ್ರಹಿಸಿ ಈಗಾಗಲೇ ಹೈದರಾಬಾದ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಾರಿ ಸಂಬಂಧ ಪ್ರಧಾನಿ ಮೋದಿ ಕೂಡ ಭರವಸೆ ನೀಡಿದ್ದಾರೆ’ ಎಂದು ಸಭೆಯಲ್ಲಿ ಮುಖಂಡರು ತಿಳಿಸಿದರು.
‘ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಮಾದಿಗ ಸಮುದಾಯಗಳು ಒಗ್ಗಟ್ಟಾಗಿ ಮುನ್ನಡೆಯಬೇಕಿದೆ’ ಎಂದರು.
ಕೋಲಾರ ಜಿಲ್ಲಾ ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷ ಹಾಲೇರಿ ಮುನಿರಾಜು, ಸಾಹುಕಾರ ಶಂಕ್ರಪ್ಪ, ಚನ್ನಸಂದ್ರ ವೆಂಕಟೇಶಪ್ಪ, ಮುನಿರಾಜು, ದಿನ್ನೆಹೊಸಳ್ಳಿ ಅಂಜಿ, ಚೋಳಘಟ್ಟ ಅಶ್ವತ್ಥ್, ಬೆಳ್ಳೂರು ನರಸಿಂಹ ಪಾಲ್ಗೊಂಡಿದ್ದರು.