ಟಿ.ಗೊಲ್ಲಹಳ್ಳಿ ನೀರಿಲ್ಲದ ಸುಮಾರು 30 ಅಡಿ ಆಳದ ಬಾವಿಯಲ್ಲಿ ಜಿಂಕೆ ಅಕಸ್ಮಿಕವಾಗಿ ಬಿದ್ದಿತ್ತು. ಅರಣ್ಯ ಇಲಾಖೆ ಮನವಿಯಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬಾವಿಗೆ ಇಳಿದು, ಜಿಂಕೆಯನ್ನು ಸುರಕ್ಷಿತವಾಗಿ ಮೇಲಕ್ಕೆ ತೆಗೆದರು. ನಂತರ ನೀರು ಕುಡಿಸಿ ಆರೈಕೆ ಮಾಡಿ ಕಾಡಿಗೆ ಬಿಟ್ಟರು. ಸಹಾಯಕ ಅಗ್ನಿಶಾಮಕದಳದ ಅಧಿಕಾರಿ ಉಮೇಶ್ ತಲಕೇರಿ ಮತ್ತು ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.