ಆಂಡರ್ಸನ್ಪೇಟೆಯ ಲಕ್ಕಿ ಮದ್ಯದ ಅಂಗಡಿಯ ಪಕ್ಕದಲ್ಲಿ ಬೇಕರಿ ಇದೆ. ಬೇಕರಿಯ ಹಿಂಭಾಗದಲ್ಲಿ ಶೀಟಿನ ಮೇಲ್ಛಾವಣಿ ಇದೆ. ಮೇಲ್ಛಾವಣಿ ಕಿತ್ತ ಕಳ್ಳರು ಬೇಕರಿ ಒಳಗೆ ಇಳಿದಿದ್ದಾರೆ. ಅಲ್ಲಿ ಮದ್ಯದ ಅಂಗಡಿಗೆ ಕನ್ನ ಕೊರೆದಿದ್ದಾರೆ. ಉಳಿ ಮತ್ತು ಸುತ್ತಿಗೆಯನ್ನು ಕನ್ನ ಕೊರೆಯಲು ಬಳಸಿದ್ದಾರೆ. ಒಬ್ಬ ವ್ಯಕ್ತಿ ಒಳಗೆ ಹೋಗುವಷ್ಟು ಕನ್ನ ಮಾಡಿದ ಕಳ್ಳರು ಮದ್ಯವನ್ನು ಅಪಹರಣ ಮಾಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಉಮೇಶ್ ಭೇಟಿ ನೀಡಿದ್ದರು. ಅಬಕಾರಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಆಂಡರ್ಸನ್ಪೇಟೆ ಪೊಲೀಸರು ಮಹಜರು
ನಡೆಸಿದರು.