ಭಿನ್ನಾಭಿಪ್ರಾಯವಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚೆ
ಪಕ್ಷ ಕಟ್ಟಿದವರ ಬಗ್ಗೆ ಗೌರವ ಹೊಂದಿರಬೇಕು. ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದ್ದರೆ ವೇದಿಕೆ ಇದೆ. ದೊಡ್ಡವರು ಇದ್ದಾರೆ. ನಮ್ಮ ನೋವನ್ನು ಅವರ ಮುಂದೆ ಹೇಳಬೇಕು. ಮಾಧ್ಯಮದ ಮುಂದೆ ಪಕ್ಷಕ್ಕೆ ಮುಜುಗರ ಮಾಡುವಂತಹ ಮತ್ತು ಅಗೌರವ ತರುವಂತಹ ಕೆಲಸ ಮಾಡಬಾರದು ಎಂಬುದು ನನ್ನ ಸಿದ್ಧಾಂತವಾಗಿದೆ. ಇವತ್ತು ನಾವು ಇರುತ್ತೇವೆ ಹೋಗುತ್ತೇವೆ. ಆದರೆ ಪಕ್ಷ ಉಳಿಯುತ್ತದೆ. ಪಕ್ಷದಲ್ಲಿ ಉಳಿದುಕೊಳ್ಳುವ ಕಾರ್ಯಕರ್ತರು ನಾಳೆ ಕೆಲಸ ಮಾಡುತ್ತಾರೆ. ಅವರಿಗೆ ಗೌರವ ಕೊಡಬೇಕು ಎಂದು ಶಾಸಕಿ ರೂಪಕಲಾ ತಿಳಿಸಿದರು.