ಬೆಂಗಳೂರು–ಮೈಸೂರು ರಸ್ತೆ ವೈಜ್ಞಾನಿಕವಾಗಿಲ್ಲ ಎಂಬ ಸುಮಲತಾ ಅವರ ಹೇಳಿಕೆ ಬಗ್ಗೆ ಇಲ್ಲಿ ಬುಧವಾರ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಉತ್ತರ ನೀಡಲು ನಾನು ತಾಂತ್ರಿಕ ತಜ್ಞನಲ್ಲ. ನಾನು ಸಾಮಾನ್ಯ ಪದವೀಧರ. ರಸ್ತೆ ಅವೈಜ್ಞಾನಿಕವಾಗಿ ಎಂದರೆ ನಾನೇನು ಉತ್ತರ ನೀಡಲಿ. ಆ ಬಗ್ಗೆ ಕೇಂದ್ರ ಸಚಿವರು, ಇಲಾಖೆ ಅಧಿಕಾರಿಗಳು ಮಾತನಾಡಬೇಕು’ ಎಂದರು.