ನಂಗಲಿ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಗುಡಿಪಲ್ಲಿಯ ಗ್ರಂಥಾಲಯ ಕಚೇರಿಯಲ್ಲಿ ಓದುವ ಬೆಳಕು ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈರಪ್ಪ ಮಾತನಾಡಿ, ಪ್ರತಿಯೊಬ್ಬರೂ ಪ್ರತಿದಿನ ಗ್ರಂಥಾಲಯಕ್ಕೆ ಬಂದು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಲೋಕದ ಜ್ಞಾನ ತಿಳಿಯುವುದಲ್ಲದೆ ಓದುವ ಅಭ್ಯಾಸ ರೂಢಿಯಾಗುತ್ತದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿಶ್ವನಾಥಾಚಾರಿ, ಗ್ರಂಥಪಾಲಕ ಚಂದ್ರಶೇಖರ್, ಪಿ.ಎಸ್. ರಘುನಾಥ್ ಹಾಜರಿದ್ದರು.