<p><strong>ಕೋಲಾರ:</strong> ಇಲ್ಲಿನ ಎಸ್ಡಿಸಿ ಕಾಲೇಜಿನಲ್ಲಿ ಬುಧವಾರ ‘ಪಾಪು ಬಾಪು ಗಾಂಧಿ’ ನಾಟಕ ಪ್ರದರ್ಶನ ನಡೆಯಿತು.</p>.<p>‘ಗಾಂಧಿ 150 ಒಂದು ರಂಗಪಯಣ’ ಎಂಬ ಕಾರ್ಯಕ್ರಮವನ್ನು ಶಿವಮೊಗ್ಗರಂಗಾಯಣ ಸಂಸ್ಥೆ ತಂಡದ ಕಲಾವಿದರು ನಾಟಕ ಪ್ರದರ್ಶನ ಮಾಡಿದರು.</p>.<p>ಮಕ್ಕಳಲ್ಲಿ ಗಾಂಧೀಜಿ ಅವರ ವಿಚಾರಧಾರೆ, ತತ್ವಾದರ್ಶಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ರೂಪಿಸಿದ ಒಂದು ಗಂಟೆ ಹತ್ತು ನಿಮಿಷದ ನಾಟಕವನ್ನು ರಂಗಯಾತ್ರೆಯ ಪ್ರಧಾನ ಸಂಚಾಲಕ ಶ್ರೀಪಾದಭಟ್ ಅವರು ನಿರ್ದೇಶಿಸಿದ್ದು, ಕಲಾವಿದರು ನಾಟಕ ಪ್ರದರ್ಶಿಸಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ ಮಾತನಾಡಿ, ‘ಅಹಿಂಸೆಯ ಮೂಲಕ ದೇಶವನ್ನು ಕಟ್ಟಿದ ಮಹಾತ್ಮಾ ಗಾಂಧೀಜಿ ಅವರ ಬದುಕು ಮತ್ತು ಚಿಂತನೆ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳುವ ಅಗತ್ಯವಿದೆ’ ಎಂದು</p>.<p>‘ಮಹಾತ್ಮ ಗಾಂಧೀಜಿ ಅವರ ನಡೆಯನ್ನು ಶ್ರಶ್ನಿಸುತ್ತಿರುವುದು ಮತ್ತು ಸ್ವಾತಂತ್ರ್ಯಗೋಸ್ಕರ ಹೋರಾಟ ಮಾಡಿರುವವರನ್ನು ಪ್ರಶ್ನಿಸುತ್ತಿರುವುದು ವಿಕೃತ ಮನಸ್ಸುಗಳ ರೀತಿ ಏನು ಎಂಬುದನ್ನು ನಾಟಕ ತೋರಿಸುತ್ತಿದೆ’ ಎಂದು ತಿಳಿಸಿದರು.</p>.<p>‘ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವವರನ್ನು ಗೌರವಿಸುವುದು ಆದ್ಯ ಕರ್ತವ್ಯ. ಗಾಂಧೀಜಿಯ ಅಹಿಂಸಾತ್ಮಕ ಹೋರಾಟಗಳು ಸತ್ಯಾಗ್ರಹಗಳು ಇಂದಿನ ಭಾರತಕ್ಕೆ ತುಂಬಾ ಅನಿವಾರ್ಯವಾಗಿರುವ ಅಂತಹ ಸಂದರ್ಭದಲ್ಲಿ ಅಂತಹ ಮಹಾನ್ ವ್ಯಕ್ತಿಯ ನಡೆಯನ್ನು ಪ್ರಶ್ನಿಸುವುದು ಅಕ್ಷಮ್ಯ ಅಪರಾಧ’ ಎಂದು ಹೇಳಿದರು.</p>.<p>ಎಸ್ಡಿಸಿ ಕಾಲೇಜಿನ ಪ್ರಾಂಶುಪಾಲೆ ಕೆ.ಪುಷ್ಪಲತಾ, ನಾಟಕದ ಸಹ ಸಂಚಾಲಕರಾದ ನಾರಾಯಣಸ್ವಾಮಿ, ಉಪನ್ಯಾಸಕರಾದ ಜಿ.ಸದಾಶಿವ, ವಿ.ಎನ್.ಮಂಜುಳಾ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಇಲ್ಲಿನ ಎಸ್ಡಿಸಿ ಕಾಲೇಜಿನಲ್ಲಿ ಬುಧವಾರ ‘ಪಾಪು ಬಾಪು ಗಾಂಧಿ’ ನಾಟಕ ಪ್ರದರ್ಶನ ನಡೆಯಿತು.</p>.<p>‘ಗಾಂಧಿ 150 ಒಂದು ರಂಗಪಯಣ’ ಎಂಬ ಕಾರ್ಯಕ್ರಮವನ್ನು ಶಿವಮೊಗ್ಗರಂಗಾಯಣ ಸಂಸ್ಥೆ ತಂಡದ ಕಲಾವಿದರು ನಾಟಕ ಪ್ರದರ್ಶನ ಮಾಡಿದರು.</p>.<p>ಮಕ್ಕಳಲ್ಲಿ ಗಾಂಧೀಜಿ ಅವರ ವಿಚಾರಧಾರೆ, ತತ್ವಾದರ್ಶಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ರೂಪಿಸಿದ ಒಂದು ಗಂಟೆ ಹತ್ತು ನಿಮಿಷದ ನಾಟಕವನ್ನು ರಂಗಯಾತ್ರೆಯ ಪ್ರಧಾನ ಸಂಚಾಲಕ ಶ್ರೀಪಾದಭಟ್ ಅವರು ನಿರ್ದೇಶಿಸಿದ್ದು, ಕಲಾವಿದರು ನಾಟಕ ಪ್ರದರ್ಶಿಸಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ ಮಾತನಾಡಿ, ‘ಅಹಿಂಸೆಯ ಮೂಲಕ ದೇಶವನ್ನು ಕಟ್ಟಿದ ಮಹಾತ್ಮಾ ಗಾಂಧೀಜಿ ಅವರ ಬದುಕು ಮತ್ತು ಚಿಂತನೆ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳುವ ಅಗತ್ಯವಿದೆ’ ಎಂದು</p>.<p>‘ಮಹಾತ್ಮ ಗಾಂಧೀಜಿ ಅವರ ನಡೆಯನ್ನು ಶ್ರಶ್ನಿಸುತ್ತಿರುವುದು ಮತ್ತು ಸ್ವಾತಂತ್ರ್ಯಗೋಸ್ಕರ ಹೋರಾಟ ಮಾಡಿರುವವರನ್ನು ಪ್ರಶ್ನಿಸುತ್ತಿರುವುದು ವಿಕೃತ ಮನಸ್ಸುಗಳ ರೀತಿ ಏನು ಎಂಬುದನ್ನು ನಾಟಕ ತೋರಿಸುತ್ತಿದೆ’ ಎಂದು ತಿಳಿಸಿದರು.</p>.<p>‘ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವವರನ್ನು ಗೌರವಿಸುವುದು ಆದ್ಯ ಕರ್ತವ್ಯ. ಗಾಂಧೀಜಿಯ ಅಹಿಂಸಾತ್ಮಕ ಹೋರಾಟಗಳು ಸತ್ಯಾಗ್ರಹಗಳು ಇಂದಿನ ಭಾರತಕ್ಕೆ ತುಂಬಾ ಅನಿವಾರ್ಯವಾಗಿರುವ ಅಂತಹ ಸಂದರ್ಭದಲ್ಲಿ ಅಂತಹ ಮಹಾನ್ ವ್ಯಕ್ತಿಯ ನಡೆಯನ್ನು ಪ್ರಶ್ನಿಸುವುದು ಅಕ್ಷಮ್ಯ ಅಪರಾಧ’ ಎಂದು ಹೇಳಿದರು.</p>.<p>ಎಸ್ಡಿಸಿ ಕಾಲೇಜಿನ ಪ್ರಾಂಶುಪಾಲೆ ಕೆ.ಪುಷ್ಪಲತಾ, ನಾಟಕದ ಸಹ ಸಂಚಾಲಕರಾದ ನಾರಾಯಣಸ್ವಾಮಿ, ಉಪನ್ಯಾಸಕರಾದ ಜಿ.ಸದಾಶಿವ, ವಿ.ಎನ್.ಮಂಜುಳಾ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>