<p><strong>ಕೆಜಿಎಫ್:</strong> ಬೆಮಲ್ ನಗರ ಪೊಲೀಸರು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ಸ್ವಯಂಸೇವಾ ಸಂಘಟನೆ ಹೊಂದಿರುವ ಎಲ್. ಬಾಬು ಮತ್ತು ಅವರ ಕುಟುಂಬದವರು ಬುಧವಾರ ರಾತ್ರಿ ಬೆಮಲ್ ನಗರ ಠಾಣೆ ಮುಂಭಾಗ ಧರಣಿ ನಡೆಸಿದರು.</p>.<p>ಆರ್ಟಿಒ ಕಚೇರಿ ಸಿಬ್ಬಂದಿ ವಿರುದ್ಧ ಸಾರಿಗೆ ಇಲಾಖೆಗೆ ದೂರು ನೀಡಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ ಜೊತೆ ಬೆಮಲ್ ಪೊಲೀಸರು ಶಾಮೀಲಾಗಿ ವಿನಾಕಾರಣ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಬೆದರಿಕೆ ಹಾಕುತ್ತಿದ್ದಾರೆ. ನಾನು ಇಲ್ಲಿಯೇ ಸಾಯುತ್ತೇನೆ ಎಂದು ಬಾಬು ಠಾಣೆ ಮುಂಭಾಗದಲ್ಲಿ ಕುಳಿತು ಫೇಸ್ಬುಕ್ ಲೈವ್ನಲ್ಲಿ ಹೇಳಿದ್ದಾರೆ.</p>.<p>‘ಸಬ್ ಇನ್ಸ್ಪೆಕ್ಟರ್ ವಿಜಯ ಕುಮಾರ್ ತೊಂದರೆ ಕೊಡುತ್ತಿದ್ದಾರೆ. ಎಸ್.ಪಿ ಮತ್ತು ಡಿವೈಎಸ್ಪಿ ಸ್ಥಳಕ್ಕೆ ಆಗಮಿಸಬೇಕು. ಅಲ್ಲಿಯವರೆವಿಗೂ ಇಲ್ಲಿಯೇ ಕುಳಿತುಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಿದರು.</p>.<p>ಆತನ ಜೊತೆ ಅವರ ಕುಟುಂಬದ ಏಳೆಂಟು ಮಹಿಳೆಯರು ಕೂಡ ಠಾಣೆ ಆವರಣದಲ್ಲಿ ಕುಳಿತರು. ಬಾಬು ಅವರ ಮಗಳು ಬ್ಲೇಡ್ ಇಟ್ಟುಕೊಂಡು ತಾನು ಕೊಯ್ದುಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದರು. ಮಹಿಳೆಯರ ಕೂಗಾಟದಿಂದ ವಿಚಲಿತರಾದ ರಾತ್ರಿ ಪಾಳಿಯದಲ್ಲಿದ್ದ ಪೊಲೀಸರು ಧರಣಿ ನಿಲ್ಲಿಸುವಂತೆ ಕೇಳಿದರು.</p>.<p>ಠಾಣೆಯೊಳಗೆ ಮೊಬೈಲ್ ಚಿತ್ರೀಕರಣ ಮಾಡದಂತೆ ತಿಳಿಸಿದರು. ಆಗ ಪೊಲೀಸರ ಮೇಲೆ ಹರಿಹಾಯ್ದ ಮಹಿಳೆಯರು ಅವರನ್ನು ಹಿಗ್ಗಾಮುಗ್ಗ ಹೀಯಾಳಿಸಿದರು. ಒಂದು ಹಂತದಲ್ಲಿ ಠಾಣೆಯಿಂದ ಹೊರಬಂದ ಪೊಲೀಸರು ಮೂಕಪ್ರೇಕ್ಷಕರಾಗಿ ವೀಕ್ಷಿಸುತ್ತಿದ್ದರು.</p>.<p>ನಂತರ ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್ಪೆಕ್ಟರ್ ವಿಜಯಕುಮಾರ್ ಧರಣಿ ನಿರತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ರಾತ್ರಿ 11 ಗಂಟೆಯಿಂದ ಸುಮಾರು ಅರ್ಧ ಗಂಟೆಗಳ ಕಾಲ ಬಾಬು ಮತ್ತು ಕುಟುಂಬದವರು ಠಾಣೆಯಲ್ಲಿ ಕುಳಿತಿದ್ದರು. ಕೊನೆಗೆ ಅವರನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್:</strong> ಬೆಮಲ್ ನಗರ ಪೊಲೀಸರು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ಸ್ವಯಂಸೇವಾ ಸಂಘಟನೆ ಹೊಂದಿರುವ ಎಲ್. ಬಾಬು ಮತ್ತು ಅವರ ಕುಟುಂಬದವರು ಬುಧವಾರ ರಾತ್ರಿ ಬೆಮಲ್ ನಗರ ಠಾಣೆ ಮುಂಭಾಗ ಧರಣಿ ನಡೆಸಿದರು.</p>.<p>ಆರ್ಟಿಒ ಕಚೇರಿ ಸಿಬ್ಬಂದಿ ವಿರುದ್ಧ ಸಾರಿಗೆ ಇಲಾಖೆಗೆ ದೂರು ನೀಡಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ ಜೊತೆ ಬೆಮಲ್ ಪೊಲೀಸರು ಶಾಮೀಲಾಗಿ ವಿನಾಕಾರಣ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಬೆದರಿಕೆ ಹಾಕುತ್ತಿದ್ದಾರೆ. ನಾನು ಇಲ್ಲಿಯೇ ಸಾಯುತ್ತೇನೆ ಎಂದು ಬಾಬು ಠಾಣೆ ಮುಂಭಾಗದಲ್ಲಿ ಕುಳಿತು ಫೇಸ್ಬುಕ್ ಲೈವ್ನಲ್ಲಿ ಹೇಳಿದ್ದಾರೆ.</p>.<p>‘ಸಬ್ ಇನ್ಸ್ಪೆಕ್ಟರ್ ವಿಜಯ ಕುಮಾರ್ ತೊಂದರೆ ಕೊಡುತ್ತಿದ್ದಾರೆ. ಎಸ್.ಪಿ ಮತ್ತು ಡಿವೈಎಸ್ಪಿ ಸ್ಥಳಕ್ಕೆ ಆಗಮಿಸಬೇಕು. ಅಲ್ಲಿಯವರೆವಿಗೂ ಇಲ್ಲಿಯೇ ಕುಳಿತುಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಿದರು.</p>.<p>ಆತನ ಜೊತೆ ಅವರ ಕುಟುಂಬದ ಏಳೆಂಟು ಮಹಿಳೆಯರು ಕೂಡ ಠಾಣೆ ಆವರಣದಲ್ಲಿ ಕುಳಿತರು. ಬಾಬು ಅವರ ಮಗಳು ಬ್ಲೇಡ್ ಇಟ್ಟುಕೊಂಡು ತಾನು ಕೊಯ್ದುಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದರು. ಮಹಿಳೆಯರ ಕೂಗಾಟದಿಂದ ವಿಚಲಿತರಾದ ರಾತ್ರಿ ಪಾಳಿಯದಲ್ಲಿದ್ದ ಪೊಲೀಸರು ಧರಣಿ ನಿಲ್ಲಿಸುವಂತೆ ಕೇಳಿದರು.</p>.<p>ಠಾಣೆಯೊಳಗೆ ಮೊಬೈಲ್ ಚಿತ್ರೀಕರಣ ಮಾಡದಂತೆ ತಿಳಿಸಿದರು. ಆಗ ಪೊಲೀಸರ ಮೇಲೆ ಹರಿಹಾಯ್ದ ಮಹಿಳೆಯರು ಅವರನ್ನು ಹಿಗ್ಗಾಮುಗ್ಗ ಹೀಯಾಳಿಸಿದರು. ಒಂದು ಹಂತದಲ್ಲಿ ಠಾಣೆಯಿಂದ ಹೊರಬಂದ ಪೊಲೀಸರು ಮೂಕಪ್ರೇಕ್ಷಕರಾಗಿ ವೀಕ್ಷಿಸುತ್ತಿದ್ದರು.</p>.<p>ನಂತರ ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್ಪೆಕ್ಟರ್ ವಿಜಯಕುಮಾರ್ ಧರಣಿ ನಿರತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ರಾತ್ರಿ 11 ಗಂಟೆಯಿಂದ ಸುಮಾರು ಅರ್ಧ ಗಂಟೆಗಳ ಕಾಲ ಬಾಬು ಮತ್ತು ಕುಟುಂಬದವರು ಠಾಣೆಯಲ್ಲಿ ಕುಳಿತಿದ್ದರು. ಕೊನೆಗೆ ಅವರನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>