ಟೇಕಲ್: ಹೋಬಳಿ ಸೇರಿದಂತೆ ವಿವಿಧೆಡೆ ಗುರುವಾರ ರಾತ್ರಿ ಸುರಿದ ಮಳೆಗೆ ಟೇಕಲ್ ಹೋಬಳಿಯಲ್ಲಿ ಬತ್ತಿ ಹೋಗಿದ್ದ ಕೆರೆಗಳಿಗೆ ಮರು ಜೀವ ಬಂದಂತಾಗಿದೆ.
ಮೂರು ತಿಂಗಳ ಹಿಂದೆ ದನ ಕರುಗಳಿಗೆ ನೀರಿಲ್ಲದೆ ಬತ್ತಿ ಹೋಗಿದ್ದ ಕೆರೆಗಳಿಂದ ಅಂತರ್ಜಲ ಮಟ್ಟ ಕುಸಿದು ಬೋರ್ವೆಲ್ಗಳು ನಿಂತು ಹೋಗಿದ್ದವು. ಇದರಿಂದ ರೈತರು ಕಂಗಲಾಗಿದ್ದು, ಮಳೆಗಾಗಿ ಕಾದು ಕುಳಿತಿದ್ದರು.
ಒಂದು ವಾರದಿಂದ ಸುರಿದ ಮಳೆಯಿಂದ ಕೆರೆ ಕುಂಟೆಗಳಿಗೆ ನೀರು ಬಂದಿದ್ದು, ರೈತರ ಮುಖದಲ್ಲಿ ಸಂತಸ ಮೂಡಿದೆ.