ಗುರುವಾರ ಮುಂಜಾನೆಯೇ ಗಣಪತಿ ಪೂಜೆ, ವೇದಪಾರಾಯಣ, ಪ್ರಾಣ ಪ್ರತಿಷ್ಠೆ, ಕಳಾ ಹೋಮ, ಪ್ರತಿಷ್ಠಾಂಗ ಪ್ರಧಾನ ಹೋಮ, ಪೂರ್ಣಾಹುತಿ, ಕುಂಭ ವಿಸರ್ಜನೆ, ಕುಂಭಾಭಿಷೇಕ, ದೇವಿಗೆ ಪುಷ್ಪ ಅಲಂಕಾರ, ಗಂಗಾಪೂಜೆ, ಲಕ್ಷ್ಮಿ ಪೂಜೆ, ಮಹಾಮಂಗಳಾರತಿ ಹಾಗೂ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಪಾಲಾರ್ ವಾಕಿಂಗ್ ಟೀಮ್ ಸದಸ್ಯರಾದ ನಿವೃತ್ತ ಮುಖ್ಯಶಿಕ್ಷಕ ಹನುಮಂತಪ್ಪ, ಶ್ರೀಹರಿ, ಎಲ್ಐಸಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಸೇತುರಾಮ್, ಮುಖ್ಯಶಿಕ್ಷಕ ರಾಮಚಂದ್ರಪ್ಪ, ತಿಮ್ಮೇಗೌಡ, ಸುರೇಂದ್ರ ಗೌಡ, ಮುರಳಿ, ನಾರಾಯಣಸ್ವಾಮಿ, ಹುಲ್ಕೂರು ಮಧು, ಅಶ್ವಥಪ್ಪ ದೇವಿಯ ಪ್ರತಿಷ್ಠಾಪನೆಯ ಮುಂದಾಳತ್ವವಹಿಸಿದ್ದರು.