ಸೋಮವಾರ, 16 ಮಾರ್ಚ್ 2026
×
ADVERTISEMENT

ಮುಳಬಾಗಿಲು: ಮೀಸಲಾತಿ ದುರ್ಬಳಕೆ ವಿರುದ್ಧ ಕ್ರಠಿಣ ಕ್ರಮ: ಸಚಿವ ಮುನಿಯಪ್ಪ

Published : 29 ಆಗಸ್ಟ್ 2025, 5:15 IST
Last Updated : 29 ಆಗಸ್ಟ್ 2025, 5:15 IST
ADVERTISEMENT
ಫಾಲೋ ಮಾಡಿ
Comments
ದೈವಭಕ್ತಿಗೆ ಜಾತಿ ಇಲ್ಲ
‘ಶತಮಾನಗಳ ಹಿಂದೆಯೇ ಪೋತುಲೂರಿ ವೀರಬ್ರಹ್ಮಯ್ಯ ಅವರಿಗೆ ಮುಸಲ್ಮಾನ್ ವ್ಯಕ್ತಿ ಶಿಷ್ಯರಾಗಿದ್ದರು. ಹೀಗಿರುವಾಗ ಮುಸ್ಲಿಂ ಲೇಖಕಿ ಬಾನು ಮುಷ್ತಾಕ್‌ ದಸರಾ ಉದ್ಘಾಟನೆ ಮಾಡಿದರೆ ತಪ್ಪೇನು?’ ಎಂದು ಕೆ.ಎಚ್.ಮುನಿಯಪ್ಪ ಪ್ರಶ್ನಿಸಿದರು.
ಒಳಮೀಸಲು; 12 ಲಕ್ಷ ಮಂದಿ ನೋಂದಣಿ ಆಗಿಲ್ಲ
‘ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದಲ್ಲಿ ನಡೆದ ಪರಿಶಿಷ್ಟ ಜಾತಿಯ ಒಳಮೀಸಲು ಸಮೀಕ್ಷೆ ಸಮರ್ಪಕವಾಗಿದೆ. ಆದರೆ ಶೇ 92ರಷ್ಟು ಜನರು ಮಾತ್ರ ನೋಂದಣಿ ಮಾಡಿದ್ದಾರೆ. ಶೇ 8ರಷ್ಟು ಮಂದಿ ಗಣತಿಗೆ ಒಳಪಟ್ಟಿಲ್ಲ. ಅಂದರೆ ಸುಮಾರು 12 ಲಕ್ಷ ಮಂದಿ ಪರಿಶಿಷ್ಟ ಜಾತಿಯವರು ಇನ್ನೂ ನೋಂದಣಿ ಮಾಡಿಸಿಲ್ಲ. ಶೇ 90ರಷ್ಟು ಬಂದರೂ ಕಾರ್ಯರೂಪಕ್ಕೆ ತರಬೇಕೆಂದು ಸರ್ಕಾರ ತೀರ್ಮಾನಿಸಿತ್ತು. ಅದರಂತೆ ಆದೇಶ ಆಗಿದ್ದು ಶಾಶ್ವತ ಆಯೋಗ ಮಾಡಿರುವುದರಿಂದ ಕಾಲಕಾಲಕ್ಕೆ ಈ ವಿಚಾರದಲ್ಲಿ ಪರಿಷ್ಕರಣೆ ಆಗುತ್ತದೆ’ ಎಂದು ಮುನಿಯಪ್ಪ ಹೇಳಿದರು.
ಮುಸ್ಲಿಮರ ಹಬ್ಬ ಹಿಂದೂಗಳ ಕೈಯಲ್ಲಿ ಉದ್ಘಾಟಿಸಿ
‘ದಸರಾ ಉದ್ಘಾಟನೆ ಸಮಸ್ಯೆ ರಾಜ್ಯ ಸರ್ಕಾರವನ್ನು ಎಲ್ಲಿಗೆ ಎಳೆದುಕೊಂಡು ಹೋಗುತ್ತದೆಯೋ ನೋಡಬೇಕು. ಮುಸ್ಲಿಮರ ಕೈಯಲ್ಲಿ ದಸರಾ ಉದ್ಘಾಟನೆ ಮಾಡಿಸುವ ಈ ಸರ್ಕಾರ ಮುಸಲ್ಮಾನರ ಹಬ್ಬಗಳನ್ನು ಹಿಂದೂಗಳ ಕೈಯಲ್ಲಿ ಉದ್ಘಾಟಿಸಿದರೆ ಆಗ ಕಾಂಗ್ರೆಸ್ ಮಾಡಿದ್ದು ಸರಿ ಎಂದು ಹೇಳುತ್ತೇನೆ’ ಎಂದು ಮುಳಬಾಗಿಲು ಜೆಡಿಎಸ್‌ ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು. ‘ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಹೇಳುವ ಕಾಂಗ್ರೆಸ್ ಸರ್ಕಾರ ಈಗಾಗಲೇ ರಾಜ್ಯದ ಮುಕ್ಕಾಲು ಭಾಗವನ್ನು ಮಾರಾಟಕ್ಕಿಟ್ಟಿದೆ. ಉಳಿದ ಕಾಲು ಭಾಗವನ್ನು ಹಿಂದೂಗಳೆಲ್ಲರೂ ಸೇರಿ ಉಳಿಸಿಕೊಳ್ಳಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT