ಕಾಮಗಾರಿ ಆರಂಭಿಸಿ: ‘ಅಧಿಕಾರ ಇಂದು ಇರುತ್ತದೆ, ನಾಳೆ ಹೋಗುತ್ತದೆ. ಆದರೆ, ನಾವು ಮಾಡಿದ ಕೆಲಸಗಳು ಮಾತ್ರ ನಮ್ಮ ಹೆಸರು ಹೇಳುತ್ತವೆ. ಜನ ಪ್ರತಿನಿಧಿಗಳು ಕೊರೊನಾ ಸಂದರ್ಭದಲ್ಲಿ ಒಂದು ಕೆ.ಜಿ ಮೈದಾ ಹಿಟ್ಟು ಹಂಚಿ ತಾಲ್ಲೂಕಿನ ಜನತೆಯನ್ನುಉದ್ಧಾರ ಮಾಡಿದ್ದೇವೆ ಎಂದು ಪ್ರಚಾರ ಪಡೆಯುವುದು ಬಿಟ್ಟು ನಿಂತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿ
ಸಬೇಕು. ಈ ಮೂಲಕ ವಿದ್ಯಾರ್ಥಿಗಳಿಗೆ, ಜನರಿಗೆ ಅನುಕೂಲ ಕಲ್ಪಸಬೇಕು’ ಎಂದು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಕಿಡಿ ಕಾರಿದರು.