‘ದೇಶವನ್ನು ದಾಸ್ಯದ ಸಂಕೋಲೆಯಿಂದ ಬಿಡಿಸುವ ಸುಭಾಷ್ಚಂದ್ರ ಬೋಸ್ರ ಕನಸು ಮತ್ತು ಯೋಜನೆ ಸಫಲವಾಗಿದ್ದರೆ ಭಾರತ ಎಂದೋ ವಿಶ್ವ ಗುರುವಾಗಿರುತ್ತಿತ್ತು. ಆದರೆ, ಆಗಿನ ಕುತಂತ್ರಿಗಳ, ರಾಜಕೀಯ ದುರುಳರ ವ್ಯವಸ್ಥಿತ ಕುತಂತ್ರದಿಂದ ಅವರ ಯೋಜನೆ ಮತ್ತು ಯೋಚನೆ ಸಫಲವಾಗಲಿಲ್ಲ’ ಎಂದು ಜಿಲ್ಲಾ ಮಾಜಿ ಯೋಧರ ಟ್ರಸ್ಟ್ ಉಪಾಧ್ಯಕ್ಷ ಕೃಷ್ಣಮೂರ್ತಿ ಕಳವಳ ವ್ಯಕ್ತಪಡಿಸಿದರು.