ಕೆಜಿಎಫ್ ಉಪ ಕಾರಾಗೃಹದ ಬ್ಯಾರಕ್ನಲ್ಲಿ ಮಂಗಳವಾರ ಆರೋಪಿಯನ್ನು ಭೇಟಿಯಾದ ಜಿಲ್ಲಾಧಿಕಾರಿಯು ಆತನಿಗೆ ಬುದ್ಧಿ ಮಾತು ಹೇಳಿದ್ದಾರೆ. ಈ ವೇಳೆ ಆರೋಪಿಯು, ‘ನನ್ನ ಜಮೀನು ಕೈ ಬಿಟ್ಟು ಹೋಗುತ್ತದೆ ಎಂಬ ಉದ್ವೇಗದಲ್ಲಿ ತಹಶೀಲ್ದಾರ್ಗೆ ಚಾಕುವಿನಿಂದ ಇರಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ ಅಮ್ಮ’ ಎಂದು ಜಿಲ್ಲಾಧಿಕಾರಿ ಬಳಿ ಅಂಗಲಾಚಿ ಕ್ಷಮೆ ಕೋರಿದ್ದಾನೆ ಎಂದು ಗೊತ್ತಾಗಿದೆ.