<p><strong>ಕೋಲಾರ:</strong> ‘ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕುವುದರಲ್ಲೇ ಮಗ್ನವಾಗಿರುವ ರಾಜ್ಯ ಸರ್ಕಾರ ಮುಷ್ಕರದಿಂದ ಜನರಿಗೆ ಆಗುತ್ತಿರುವ ಸಂಕಷ್ಟ ಪರಿಹರಿಸುವತ್ತ ಗಮನ ಹರಿಸುತ್ತಿಲ್ಲ’ ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಜಿಲ್ಲೆಯ ಶ್ರೀನಿವಾಸಪುರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುಷ್ಕರನಿರತ ಸಾರಿಗೆ ನೌಕರರು ಮನುಷ್ಯರೇ. ಸರ್ಕಾರ ಅವರನ್ನು ಶತ್ರುಗಳಂತೆ ನೋಡುತ್ತಿರುವುದು ಸಾಧುವಲ್ಲ. ಸರ್ಕಾರ ನೌಕರರೊಂದಿಗೆ ಯುದ್ಧ ಸಾರುವುದನ್ನು ಬಿಟ್ಟು ಸೌಹಾರ್ದಯುತವಾಗಿ ಮಾತುಕತೆ ನಡೆಸಬೇಕು’ ಎಂದು ಸಲಹೆ ನೀಡಿದರು.</p>.<p>‘ಸಾರಿಗೆ ನೌಕರರು ಕೆಳ ಆರ್ಥಿಕ ವರ್ಗದವರು. ಬಸ್ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಜನ ಸಹ ಇದೇ ವರ್ಗಕ್ಕೆ ಸೇರಿದವರು. ಈ ಎರಡೂ ವರ್ಗದ ಜನರ ಹಿತ ಮುಖ್ಯ. ಜನರಿಗೆ ತೊಂದರೆ ಕೊಡುವ ಉದ್ದೇಶ ನೌಕರರಿಗಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೊಗುವವರೆಗೆ ಬಿಟ್ಟು ಈಗ ನೌಕರರ ವಿರುದ್ಧ ಕಾನೂನು ಅಸ್ತ್ರ ಪ್ರಯೋಗ ಮಾಡುತ್ತಿರುವ ಸರ್ಕಾರದ ನಡೆ ಸರಿಯಲ್ಲ’ ಎಂದು ಟೀಕಿಸಿದರು.</p>.<p>‘ಸರ್ಕಾರ ಮುಷ್ಕರನಿರತ ನೌಕರರನ್ನು ಮನಸೋಇಚ್ಛೆ ವರ್ಗಾವಣೆ ಮಾಡುತ್ತಿದೆ. ನೌಕರರ ವೇತನ ತಡೆ ಹಿಡಿದಿದೆ. ದುಡಿಮೆ ವರ್ಗದ ಮೇಲೆ ಶಿಸ್ತು ಏರುತ್ತಿದೆ. ಈ ದಬ್ಬಾಳಿಕೆ ಖಂಡಿಸುತ್ತೇವೆ. ಖಾಸಗಿ ಬಸ್ಗಳನ್ನು ರಸ್ತೆಗಿಳಿಸಿ ಸಾರಿಗೆ ನೌಕರರನ್ನು ಬೆದರಿಸುವ ತಂತ್ರ ಸರಿಯಲ್ಲ. ಬೆದರಿಕೆ ಕಡೆಯ ಅಸ್ತ್ರವಾಗಬೇಕು. ಸರ್ಕಾರ ಪ್ರತಿಷ್ಠೆ ಬಿಟ್ಟು ಸಮಸ್ಯೆ ಬಗೆಹರಿಸಬೇಕು. ಸರ್ಕಾರ ಬಯಸಿದರೆ ಸಲಹೆ ಸಹಕಾರ ನೀಡುತ್ತೇವೆ’ ಎಂದರು.</p>.<p>‘ಜನರ ಅನುಕೂಲಕ್ಕೆ ಶಾಸನ ರೂಪಿಸಲಾಗಿದೆ. ಶಾಸನಗಳ ಉದ್ದೇಶ ಜನರನ್ನು ಹೆದರಿಸುವುದಲ್ಲ. ಮುಷ್ಕರನಿರತ ನೌಕರರು ಧೃತಿಗೆಡಬಾರದು. ದುಡಿಯುವ ವರ್ಗಕ್ಕೆ ಸದಾ ನಮ್ಮ ಬೆಂಬಲವಿದೆ. ನೌಕರರು ಹತಾಶರಾಗದೆ ಮತ್ತು ಹಟಕ್ಕೆ ಬೀಳದೆ ತಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ‘ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕುವುದರಲ್ಲೇ ಮಗ್ನವಾಗಿರುವ ರಾಜ್ಯ ಸರ್ಕಾರ ಮುಷ್ಕರದಿಂದ ಜನರಿಗೆ ಆಗುತ್ತಿರುವ ಸಂಕಷ್ಟ ಪರಿಹರಿಸುವತ್ತ ಗಮನ ಹರಿಸುತ್ತಿಲ್ಲ’ ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಜಿಲ್ಲೆಯ ಶ್ರೀನಿವಾಸಪುರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುಷ್ಕರನಿರತ ಸಾರಿಗೆ ನೌಕರರು ಮನುಷ್ಯರೇ. ಸರ್ಕಾರ ಅವರನ್ನು ಶತ್ರುಗಳಂತೆ ನೋಡುತ್ತಿರುವುದು ಸಾಧುವಲ್ಲ. ಸರ್ಕಾರ ನೌಕರರೊಂದಿಗೆ ಯುದ್ಧ ಸಾರುವುದನ್ನು ಬಿಟ್ಟು ಸೌಹಾರ್ದಯುತವಾಗಿ ಮಾತುಕತೆ ನಡೆಸಬೇಕು’ ಎಂದು ಸಲಹೆ ನೀಡಿದರು.</p>.<p>‘ಸಾರಿಗೆ ನೌಕರರು ಕೆಳ ಆರ್ಥಿಕ ವರ್ಗದವರು. ಬಸ್ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಜನ ಸಹ ಇದೇ ವರ್ಗಕ್ಕೆ ಸೇರಿದವರು. ಈ ಎರಡೂ ವರ್ಗದ ಜನರ ಹಿತ ಮುಖ್ಯ. ಜನರಿಗೆ ತೊಂದರೆ ಕೊಡುವ ಉದ್ದೇಶ ನೌಕರರಿಗಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೊಗುವವರೆಗೆ ಬಿಟ್ಟು ಈಗ ನೌಕರರ ವಿರುದ್ಧ ಕಾನೂನು ಅಸ್ತ್ರ ಪ್ರಯೋಗ ಮಾಡುತ್ತಿರುವ ಸರ್ಕಾರದ ನಡೆ ಸರಿಯಲ್ಲ’ ಎಂದು ಟೀಕಿಸಿದರು.</p>.<p>‘ಸರ್ಕಾರ ಮುಷ್ಕರನಿರತ ನೌಕರರನ್ನು ಮನಸೋಇಚ್ಛೆ ವರ್ಗಾವಣೆ ಮಾಡುತ್ತಿದೆ. ನೌಕರರ ವೇತನ ತಡೆ ಹಿಡಿದಿದೆ. ದುಡಿಮೆ ವರ್ಗದ ಮೇಲೆ ಶಿಸ್ತು ಏರುತ್ತಿದೆ. ಈ ದಬ್ಬಾಳಿಕೆ ಖಂಡಿಸುತ್ತೇವೆ. ಖಾಸಗಿ ಬಸ್ಗಳನ್ನು ರಸ್ತೆಗಿಳಿಸಿ ಸಾರಿಗೆ ನೌಕರರನ್ನು ಬೆದರಿಸುವ ತಂತ್ರ ಸರಿಯಲ್ಲ. ಬೆದರಿಕೆ ಕಡೆಯ ಅಸ್ತ್ರವಾಗಬೇಕು. ಸರ್ಕಾರ ಪ್ರತಿಷ್ಠೆ ಬಿಟ್ಟು ಸಮಸ್ಯೆ ಬಗೆಹರಿಸಬೇಕು. ಸರ್ಕಾರ ಬಯಸಿದರೆ ಸಲಹೆ ಸಹಕಾರ ನೀಡುತ್ತೇವೆ’ ಎಂದರು.</p>.<p>‘ಜನರ ಅನುಕೂಲಕ್ಕೆ ಶಾಸನ ರೂಪಿಸಲಾಗಿದೆ. ಶಾಸನಗಳ ಉದ್ದೇಶ ಜನರನ್ನು ಹೆದರಿಸುವುದಲ್ಲ. ಮುಷ್ಕರನಿರತ ನೌಕರರು ಧೃತಿಗೆಡಬಾರದು. ದುಡಿಯುವ ವರ್ಗಕ್ಕೆ ಸದಾ ನಮ್ಮ ಬೆಂಬಲವಿದೆ. ನೌಕರರು ಹತಾಶರಾಗದೆ ಮತ್ತು ಹಟಕ್ಕೆ ಬೀಳದೆ ತಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>