ಈ ಪ್ರಕರಣದ ಪ್ರಮುಖ ಆರೋಪಿ ವೆಂಕಟೇಶಪ್ಪ ಆವಲಹಳ್ಳಿಯಲ್ಲಿನ ತನ್ನ ಮಾವ ಮುನಿರಾಜು ಅವರ ಮನೆಯಲ್ಲಿ ಆಶ್ರಯ ಪಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಎಸ್ಐ ವಸಂತ್, ಕಾನ್ಸ್ಟೆಬಲ್ ವೆಂಕಟೇಶ್ ಆರೋಪಿಯನ್ನು ಬಂಧಿಸಲು ಹೋಗಿದ್ದರು. ಆಗ ವೆಂಕಟೇಶಪ್ಪ, ಆತನ ತಮ್ಮ ನಾಗೇಶ್, ಮುನಿರಾಜು, ಸಂಬಂಧಿಕರಾದ ಸುಧಾ ಮತ್ತು ಲಕ್ಷ್ಮಿ ಅವರು ಎಸ್ಐ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ. ಅಲ್ಲದೇ, ಗಾಜಿನಿಂದ ಚುಚ್ಚಿ ಕೊಲೆ ಮಾಡಲೆತ್ನಿಸಿದ್ದಾರೆ.