ಕೋಲಾರ: ನಗರದ ಕೋಲಾರಮ್ಮ ದೇಗುಲ ಬಳಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂಸದ ಎಸ್.ಮುನಿಸ್ವಾಮಿ ಅವರ ಕೆನ್ನೆಗೆ ಮಾಜಿ ಸಚಿವ, ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಮುತ್ತು ನೀಡಿದರು.
ಒಮ್ಮೆಲೇ ಗಾಬರಿಯಾದ ಮುನಿಸ್ವಾಮಿ ಕೊನೆಗೆ ನಗು ಬೀರಿ ಹಣೆ ಮೇಲೆ ಕೈಇಟ್ಟುಕೊಂಡರು.
ಜಿಲ್ಲಾ ಬಿಜೆಪಿಯಲ್ಲಿ ಗೊಂದಲವಿದೆಯಲ್ಲಾ ಎಂಬ ಪ್ರಶ್ನೆಗೆ ಅವರು ಎಡಕೆನ್ನೆಗೆ ಮುತ್ತು ಕೊಡುವ ಮೂಲಕ ಉತ್ತರ ನೀಡಿದರು.
‘ಹೊಸ ವರ್ಷದಲ್ಲಿ ಜಿಲ್ಲೆಯಲ್ಲಿ ಎಲ್ಲರೂ ಜೊತೆಗೂಡಿ ಪಕ್ಷ ಕಟ್ಟಲು ಕೋಲಾರಮ್ಮನ ಮುಂದೆ ಪ್ರಮಾಣ ಮಾಡಿದ್ದೇವೆ. ನಮ್ಮ ನಾಯಕ ಮುನಿಸ್ವಾಮಿ ಜೊತೆಗೂಡಿ ಚುನಾವಣೆ ನಡೆಸುತ್ತೇವೆ. ಉಸ್ತುವಾರಿ ಸಚಿವ ಮುನಿರತ್ನ ನಮ್ಮೊಂದಿಗೆ ಇರುತ್ತಾರೆ’ ಎಂದರು.