ಗೋಡೆ ವಿಚಾರವಾಗಿ ಮುನಿರಾಜು ಮತ್ತು ಮೋಹನ್ ನಡುವೆ ರಾತ್ರಿ ಜಗಳವಾಗಿದೆ. ಈ ವೇಳೆ ಮೋಹನ್ ತನ್ನ ತಮ್ಮ ಮಧು ಹಾಗೂ ಸ್ನೇಹಿತ ಅರವಿಂದ್ ಜತೆ ಸೇರಿ ಮುನಿರಾಜು ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಮುನಿರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.