<p><strong>ಕೋಲಾರ</strong>: ತಾಲ್ಲೂಕಿನ ಶೆಟ್ಟಿಮಾದಮಂಗಲ ಗ್ರಾಮದ ಬಳಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಜಮೀನಿನಲ್ಲಿ ವಾಮಾಚಾರ ನಡೆಸಲಾಗಿದೆ.</p>.<p>ಗ್ರಾಮ ಪಂಚಾಯಿತಿ ಸದಸ್ಯ ಶೆಟ್ಟಿಮಾದಮಂಗಲದ ನಾಗರಾಜ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ದೊಡ್ಡ ಮಟ್ಟದ ವಾಮಾಚಾರ ಮಾಡಿರುವುದು ಕಂಡುಬಂದಿದ್ದು, ಗ್ರಾಮದ ಜನರಲ್ಲಿ ಆತಂಕ ಉಂಟುಮಾಡಿದೆ.</p>.<p>ಗ್ರಾಮದ ಹೊರವಲಯದ, ಕೋಲಾರ-ಚಿಂತಾಮಣಿ ಮುಖ್ಯ ರಸ್ತೆಗೆ ಇರುವ ಜಮೀನಿನಲ್ಲಿ ಶುಕ್ರವಾರ ರಾತ್ರಿ ವಾಮಾಚಾರ ನಡೆಸಿರುವುದು ಗೊತ್ತಾಗಿದೆ. ಶನಿವಾರ ಬೆಳಗ್ಗೆ ಎಂದಿನಂತೆ ಜಮೀನಿನ ಕಡೆಗೆ ನಾಗರಾಜ್ ತೆರಳಿದಾಗ ಪತ್ತೆಯಾಗಿದೆ. ಬಳಿಕ ಗ್ರಾಮಸ್ಥರು, ಸುತ್ತಮುತ್ತಲ ಜನರಿಗೆ ಮಾಹಿತಿ ನೀಡಿದ್ದಾರೆ.</p>.<p>ಕಪ್ಪು ಕೋಳಿಯನ್ನು ಹಲವು ವಸ್ತುಗಳೊಂದಿಗೆ ಮರದಲ್ಲಿ ನೇತು ಹಾಕಲಾಗಿದೆ. ಅಲ್ಲದೆ ನಿಂಬೆಹಣ್ಣು, ವಿಭೂತಿ, ಬಿಲ್ವಪತ್ರೆ ಕಾಯಿ, ಕೋಳಿ ಮೊಟ್ಟೆ, ಖರ್ಜೂ ಕಾಯಿ, ಕಂಚಿನ ಪ್ಲೇಟ್ನಲ್ಲಿ ಹೆಸರು, ಗುಂಡು ಸೂಜಿ, ಚಪ್ಪಲಿ ಮೊಳೆಗಳು ಸೇರಿದಂತೆ ಸುಮಾರು 40ರಿಂದ 50 ವಸ್ತುಗಳ ಕಟ್ಟಲಾಗಿದೆ.</p>.<p>ಬಳಿಕ ಶೆಟ್ಟಿಮಾದಮಂಗಲದ ವ್ಯಕ್ತಿಯೊಬ್ಬರನ್ನು ಸ್ಥಳಕ್ಕೆ ಕರೆಯಿಸಿ ಪೂಜೆ ಮಾಡಿಸಿ ವಸ್ತುಗಳನ್ನು ಬೆಂಕಿಗೆ ಹಾಕಿ ಸುಟ್ಟು ಹಾಕಲಾಯಿತು. ಮರದಲ್ಲಿ ನೇತಾಕಿದ್ದ ಜೀವಂತ ಕೋಳಿಯನ್ನು ಬಿಟ್ಟಿದ್ದಾರೆ. ಯಾರು ಈ ಕೃತ್ಯ ಎಸಗಿರಬಹುದು ಎನ್ನುವ ಚರ್ಚೆ ನಡೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ</strong>: ತಾಲ್ಲೂಕಿನ ಶೆಟ್ಟಿಮಾದಮಂಗಲ ಗ್ರಾಮದ ಬಳಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಜಮೀನಿನಲ್ಲಿ ವಾಮಾಚಾರ ನಡೆಸಲಾಗಿದೆ.</p>.<p>ಗ್ರಾಮ ಪಂಚಾಯಿತಿ ಸದಸ್ಯ ಶೆಟ್ಟಿಮಾದಮಂಗಲದ ನಾಗರಾಜ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ದೊಡ್ಡ ಮಟ್ಟದ ವಾಮಾಚಾರ ಮಾಡಿರುವುದು ಕಂಡುಬಂದಿದ್ದು, ಗ್ರಾಮದ ಜನರಲ್ಲಿ ಆತಂಕ ಉಂಟುಮಾಡಿದೆ.</p>.<p>ಗ್ರಾಮದ ಹೊರವಲಯದ, ಕೋಲಾರ-ಚಿಂತಾಮಣಿ ಮುಖ್ಯ ರಸ್ತೆಗೆ ಇರುವ ಜಮೀನಿನಲ್ಲಿ ಶುಕ್ರವಾರ ರಾತ್ರಿ ವಾಮಾಚಾರ ನಡೆಸಿರುವುದು ಗೊತ್ತಾಗಿದೆ. ಶನಿವಾರ ಬೆಳಗ್ಗೆ ಎಂದಿನಂತೆ ಜಮೀನಿನ ಕಡೆಗೆ ನಾಗರಾಜ್ ತೆರಳಿದಾಗ ಪತ್ತೆಯಾಗಿದೆ. ಬಳಿಕ ಗ್ರಾಮಸ್ಥರು, ಸುತ್ತಮುತ್ತಲ ಜನರಿಗೆ ಮಾಹಿತಿ ನೀಡಿದ್ದಾರೆ.</p>.<p>ಕಪ್ಪು ಕೋಳಿಯನ್ನು ಹಲವು ವಸ್ತುಗಳೊಂದಿಗೆ ಮರದಲ್ಲಿ ನೇತು ಹಾಕಲಾಗಿದೆ. ಅಲ್ಲದೆ ನಿಂಬೆಹಣ್ಣು, ವಿಭೂತಿ, ಬಿಲ್ವಪತ್ರೆ ಕಾಯಿ, ಕೋಳಿ ಮೊಟ್ಟೆ, ಖರ್ಜೂ ಕಾಯಿ, ಕಂಚಿನ ಪ್ಲೇಟ್ನಲ್ಲಿ ಹೆಸರು, ಗುಂಡು ಸೂಜಿ, ಚಪ್ಪಲಿ ಮೊಳೆಗಳು ಸೇರಿದಂತೆ ಸುಮಾರು 40ರಿಂದ 50 ವಸ್ತುಗಳ ಕಟ್ಟಲಾಗಿದೆ.</p>.<p>ಬಳಿಕ ಶೆಟ್ಟಿಮಾದಮಂಗಲದ ವ್ಯಕ್ತಿಯೊಬ್ಬರನ್ನು ಸ್ಥಳಕ್ಕೆ ಕರೆಯಿಸಿ ಪೂಜೆ ಮಾಡಿಸಿ ವಸ್ತುಗಳನ್ನು ಬೆಂಕಿಗೆ ಹಾಕಿ ಸುಟ್ಟು ಹಾಕಲಾಯಿತು. ಮರದಲ್ಲಿ ನೇತಾಕಿದ್ದ ಜೀವಂತ ಕೋಳಿಯನ್ನು ಬಿಟ್ಟಿದ್ದಾರೆ. ಯಾರು ಈ ಕೃತ್ಯ ಎಸಗಿರಬಹುದು ಎನ್ನುವ ಚರ್ಚೆ ನಡೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>