ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಂಸದ ತೇಜಸ್ವಿ ಸೂರ್ಯ ಶಿಬಿರ ವೀಕ್ಷಿಸಿದರು. ಅಲ್ಲದೇ, ರಕ್ತದಾನಿಗಳಿಗೆ ಶುಭಾಶಯ ಕೋರಿ, ಪ್ರಮಾಣಪತ್ರ ವಿತರಿಸಿದರು. ರಕ್ತದಾನ ಮಾಡಿದ ಎಲ್ಲರಿಗೂ ಜ್ಯೂಸ್, ಸೇಬು, ಬಾಳೆಹಣ್ಣು ವ್ಯವಸ್ಥೆ ಮಾಡಲಾಗಿತ್ತು. ಹೊರ ಆವರಣದಲ್ಲಿ ನೋಂದಣಿ ಕೌಂಟರ್ ತೆರೆಯಲಾಗಿತ್ತು.