<p>ಕೋಲಾರ: ಎತ್ತಿನಹೊಳೆ ಯೋಜನೆಗೆ ರಾಜ್ಯ ಸರ್ಕಾರ ಶಂಕುಸ್ಥಾಪನೆ ಮಾಡಿರುವುದನ್ನು ವಿರೋಧಿಸಿ ರೈತ ಸಂಘ–ಹಸಿರು ಸೇನೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಖಾಲಿ ಪೈಪ್ಗಳಿಗೆ ಪೂಜೆ ಮಾಡಿ, ಧರಣಿ ನಡೆಸಿದರು.<br /> <br /> ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಸೇರಿದಂತೆ ಜಿಲ್ಲೆಯ ಹಲ ಜನಪ್ರತಿನಿಧಿಗಳ ಮುಖವಾಡ ತೊಟ್ಟ ಕಾರ್ಯಕರ್ತರು ‘ಚುನಾವಣೆಯಲ್ಲಿ ಜನರನ್ನು ಓಟಿಗೋಸ್ಕರ ಯಾಮಾರಿಸಲು ಈ ಶಂಕುಸ್ಥಾಪನೆ’ ಎಂಬ ಫಲಕವನ್ನು ಖಾಲಿ ಪೈಪಿಗೆ ಕಟ್ಟಿ, ಪೂಜೆ ಸಲ್ಲಿಸುವ ಮೂಲಕ ಎತ್ತಿನ ಹೊಳೆ ಯೋಜನೆ ಶಂಕುಸ್ಥಾಪನೆ ವಿರುದ್ಧ ಪ್ರತಿಭಟಿಸಿದರು.<br /> <br /> ಡಾ.ಪರಮಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಿ ಎಂದು ದಶಕಕ್ಕೂ ಹೆಚ್ಚು ಅವಧಿಯಿಂದ ಜನ ಕೇಳುತ್ತಿದ್ದರೂ ಸರ್ಕಾರಗಳು ಮಾತ್ರ ಓಟಿಗೋಸ್ಕರ ಎತ್ತಿನ ಹೊಳೆ ಯೋಜನೆ ಎಂಬ ಭೂತಕ್ಕೆ ಶಂಕುಸ್ಥಾಪನೆ ಮಾಡಿ ದಿಕ್ಕು ತಪ್ಪಿಸಲು ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> <br /> ನಿರಂತರ ಹೋರಾಟ, ಪಾದಯಾತ್ರೆಗಳ ಮೂಲಕ ಗಮನ ಸೆಳೆಯುತ್ತಿದ್ದರೂ ಕಾಟಾಚಾರಕ್ಕೆಂಬಂತೆ ಪರಮಶಿವಯ್ಯನವರ ವರದಿ ಕುರಿತು ಸಮೀಕ್ಷಾ ವರದಿ ತಯಾರಿಸಲು ಇಸ್ರೋ ಕಂಪನಿಗೆ ಟೆಂಡರ್ ನೀಡಿದ್ದು, ಅದನ್ನು ಮೂಲೆ ಗುಂಪು ಮಾಡಲಾಯಿತು ಎಂದು ಟೀಕಿಸಿದರು.<br /> <br /> ಪರಮಶಿವಯ್ಯನವರ ತಾಂತ್ರಿಕ ವರದಿ ಸಮಿತಿಯಲ್ಲಿ ಸದಸ್ಯರಾಗಿರುವ, ಕೆ.ಸಿ.ರೆಡ್ಡಿ ಮತ್ತು ದೇಸಾಯಿ ಅವರನ್ನು ಸಮಿತಿಯಿಂದ ತೆಗೆಯಬೇಕು ಎಂದು ಆಗ್ರಹಿಸಿದರು.<br /> <br /> ಪ್ರಮುಖರಾದ ಕೆ. ಶ್ರೀನಿವಾಸಗೌಡ, ಕೆ.ನಾರಾಯಣಗೌಡ, ನಾಗರಾಜಗೌಡ, ಬಾಬು, ರಂಜಿತ್ ಕುಮಾರ್, ಕೃಷ್ಣೇಗೌಡ, ಮಂಜು, ಎನ್.ಹರೀಶ್, ರಘು, ಬಾಲು, ಆಂಜಿನಪ್ಪ , ಭಕ್ತವತ್ಸಲಂ, ಶ್ರೀನಿವಾಸ್, ರಮೇಶ್, ಮುನ್ನಾ, ಮಂಜುನಾಥ್, ಮುನೇಗೌಡ, ರಾಜೇಶ್, ಉದಯ್, ಪ್ರತಾಪ್, ಅಮರನಾರಾಯಣಸ್ವಾಮಿ, ಗಣೇಶ್, ಮೂರ್ತಿ, ರಂಜಿತ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ: ಎತ್ತಿನಹೊಳೆ ಯೋಜನೆಗೆ ರಾಜ್ಯ ಸರ್ಕಾರ ಶಂಕುಸ್ಥಾಪನೆ ಮಾಡಿರುವುದನ್ನು ವಿರೋಧಿಸಿ ರೈತ ಸಂಘ–ಹಸಿರು ಸೇನೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಖಾಲಿ ಪೈಪ್ಗಳಿಗೆ ಪೂಜೆ ಮಾಡಿ, ಧರಣಿ ನಡೆಸಿದರು.<br /> <br /> ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಸೇರಿದಂತೆ ಜಿಲ್ಲೆಯ ಹಲ ಜನಪ್ರತಿನಿಧಿಗಳ ಮುಖವಾಡ ತೊಟ್ಟ ಕಾರ್ಯಕರ್ತರು ‘ಚುನಾವಣೆಯಲ್ಲಿ ಜನರನ್ನು ಓಟಿಗೋಸ್ಕರ ಯಾಮಾರಿಸಲು ಈ ಶಂಕುಸ್ಥಾಪನೆ’ ಎಂಬ ಫಲಕವನ್ನು ಖಾಲಿ ಪೈಪಿಗೆ ಕಟ್ಟಿ, ಪೂಜೆ ಸಲ್ಲಿಸುವ ಮೂಲಕ ಎತ್ತಿನ ಹೊಳೆ ಯೋಜನೆ ಶಂಕುಸ್ಥಾಪನೆ ವಿರುದ್ಧ ಪ್ರತಿಭಟಿಸಿದರು.<br /> <br /> ಡಾ.ಪರಮಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಿ ಎಂದು ದಶಕಕ್ಕೂ ಹೆಚ್ಚು ಅವಧಿಯಿಂದ ಜನ ಕೇಳುತ್ತಿದ್ದರೂ ಸರ್ಕಾರಗಳು ಮಾತ್ರ ಓಟಿಗೋಸ್ಕರ ಎತ್ತಿನ ಹೊಳೆ ಯೋಜನೆ ಎಂಬ ಭೂತಕ್ಕೆ ಶಂಕುಸ್ಥಾಪನೆ ಮಾಡಿ ದಿಕ್ಕು ತಪ್ಪಿಸಲು ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> <br /> ನಿರಂತರ ಹೋರಾಟ, ಪಾದಯಾತ್ರೆಗಳ ಮೂಲಕ ಗಮನ ಸೆಳೆಯುತ್ತಿದ್ದರೂ ಕಾಟಾಚಾರಕ್ಕೆಂಬಂತೆ ಪರಮಶಿವಯ್ಯನವರ ವರದಿ ಕುರಿತು ಸಮೀಕ್ಷಾ ವರದಿ ತಯಾರಿಸಲು ಇಸ್ರೋ ಕಂಪನಿಗೆ ಟೆಂಡರ್ ನೀಡಿದ್ದು, ಅದನ್ನು ಮೂಲೆ ಗುಂಪು ಮಾಡಲಾಯಿತು ಎಂದು ಟೀಕಿಸಿದರು.<br /> <br /> ಪರಮಶಿವಯ್ಯನವರ ತಾಂತ್ರಿಕ ವರದಿ ಸಮಿತಿಯಲ್ಲಿ ಸದಸ್ಯರಾಗಿರುವ, ಕೆ.ಸಿ.ರೆಡ್ಡಿ ಮತ್ತು ದೇಸಾಯಿ ಅವರನ್ನು ಸಮಿತಿಯಿಂದ ತೆಗೆಯಬೇಕು ಎಂದು ಆಗ್ರಹಿಸಿದರು.<br /> <br /> ಪ್ರಮುಖರಾದ ಕೆ. ಶ್ರೀನಿವಾಸಗೌಡ, ಕೆ.ನಾರಾಯಣಗೌಡ, ನಾಗರಾಜಗೌಡ, ಬಾಬು, ರಂಜಿತ್ ಕುಮಾರ್, ಕೃಷ್ಣೇಗೌಡ, ಮಂಜು, ಎನ್.ಹರೀಶ್, ರಘು, ಬಾಲು, ಆಂಜಿನಪ್ಪ , ಭಕ್ತವತ್ಸಲಂ, ಶ್ರೀನಿವಾಸ್, ರಮೇಶ್, ಮುನ್ನಾ, ಮಂಜುನಾಥ್, ಮುನೇಗೌಡ, ರಾಜೇಶ್, ಉದಯ್, ಪ್ರತಾಪ್, ಅಮರನಾರಾಯಣಸ್ವಾಮಿ, ಗಣೇಶ್, ಮೂರ್ತಿ, ರಂಜಿತ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>