<p><span style="font-size: 26px;"><strong>ಶ್ರೀನಿವಾಸಪುರ: </strong>ತಾಲ್ಲೂಕಿನ ಮಾವಿನ ತೋಟಗಳ ಕಡೆ ಹೆಜ್ಜೆ ಹಾಕಿದರೆ, ಬಣ್ಣ ಬಣ್ಣದ ಚಿಟ್ಟೆಗಳು ಕಣ್ಣಿಗೆ ರಾಚುತ್ತವೆ. ಹಾರಾಡುವ ಹೂವುಗಳು ಎಂದು ಕರೆಯಲ್ಪಡುವ ಈ ಚಿಟ್ಟೆಗಳು ಈಗ ಮಾವಿನ ಮಡಿಲಿಗೆ ಹೊಸ ಮೆರುಗನ್ನು ತಂದುಕೊಟ್ಟಿವೆ. ನೋಡುವ ಕಣ್ಣಲ್ಲಿ ಬೆರಗು ತುಂಬಿವೆ!</span><br /> <br /> ಸಂಜೆಯ ಹೂ ಬಿಸಿಲಲ್ಲಿ ಮಾವಿನ ತೋಟಗಳ ಬೇಲಿ ಮತ್ತು ರಸ್ತೆ ಪಕ್ಕದ ಲಂಟಾನ ಗಿಡಗಳ ಹೂಗಳಿಂದ ಮಕರಂದವನ್ನು ಹೀರುತ್ತ ಹಾರುವ ಬಣ್ಣ ಬಣ್ಣದ ಚಿಟ್ಟೆಗಳು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತವೆ. ಆಸಕ್ತಿಯಿಂದ ನಿಂತು ನೋಡಿದರೆ, ಪರಿಸರ ಹಾರುವ ಚಿತ್ರಶಾಲೆಯಂತೆ ಗೋಚರಿಸುತ್ತದೆ. ಈಗಂತೂ ಈ ಚಿಟ್ಟೆಗಳು ಮಿಲನೋತ್ಸವ ಆಚರಿಸಿಕೊಳ್ಳುತ್ತಿವೆ.<br /> <br /> ಪ್ರಪಂಚದಲ್ಲಿ 1.5 ಲಕ್ಷ ಜಾತಿಯ ಚಿಟ್ಟೆಗಳಿವೆ. ಭಾರತದಲ್ಲಿ 1400 ತರದ ಚಿಟ್ಟೆಗಳಿವೆ. ಆ ಪೈಕಿ 350 ಜಾತಿಯ ಚಿಟ್ಟೆಗಳು ದಕ್ಷಿಣ ಭಾರತದಲ್ಲಿವೆ. ಪಶ್ಚಿಮ ಘಟ್ಟಗಳನ್ನು ಚಿಟ್ಟೆಗಳ ಸ್ವರ್ಗ ಎಂದು ಕರೆಯಲಾಗುತ್ತದೆ. ಆದರೆ ಬಯಲುಸೀಮೆ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ದುಂಬಿ ಜೇನ್ನೊಣಗಳಂತೆ ಚಿಟ್ಟೆಗಳೂ ಸಹ ಹೂಗಳಲ್ಲಿ ಪರಾಗಸ್ಪರ್ಶಕ್ಕೆ ನೆರವಾಗುತ್ತವೆ. ಇವುಗಳನ್ನು ಆಕರ್ಷಿಸಲೆಂದೇ ಹೂಗಳು ರಿಮಳ ಹೊರ ಸೂಸುತ್ತವೆ.<br /> <br /> ತಾಲ್ಲೂಕಿನಲ್ಲಿ ಮಳೆಯಿಲ್ಲದೆ ಬಿರು ಬೇಸಿಗೆ ವಾತಾವರಣ ನಿರ್ಮಾಣವಾಗಿದೆ. ಹೊರಗೆ ನೀರು ಸಿಗುತ್ತಿಲ್ಲ. ವಾತಾವರಣದಲ್ಲಿ ಉಷ್ಣಾಂಶ ಒಂದೇ ಸಮನೆ ಏರುತ್ತಿದೆ. ಇದರಿಂದಲೇ ಇರಬೇಕು, ಹೂವಿಂದ ಹೂವಿಗೆ ಹಾರಬೇಕಾದ ಚಿಟ್ಟೆಗಳು ಗ್ರಾಮೀಣ ಪ್ರದೇಶದ ಬಚ್ಚಲಿನ ತೇವದ ಮೇಲೂ ಕುಳಿತುಕೊಳ್ಳುತ್ತಿವೆ.<br /> <br /> ಹೂವಿನ ಮೇಲೆ ಮಾತ್ರವಲ್ಲದೆ ಪರಿಮಳಯುಕ್ತವಾದ ನಿಂಬೆ ಮತ್ತಿತರ ಗಿಡಗಳ ಎಲೆಗಳ ಮೇಲೂ ಕುಳಿತು, ಎದ್ದು ಹಾರಾಡುತ್ತಿವೆ. ಈ ಬಾರಿ ರಾತ್ರಿ ಹೊತ್ತು ಬಣ್ಣದಲ್ಲಿ ಅಷ್ಟೇನೂ ಆಕರ್ಷಣೆ ಇಲ್ಲದ ಪತಂಗಗಳೂ ಕಾಣಿಸಿಕೊಳ್ಳುತ್ತಿವೆ. ಅವು ವಿದ್ಯುತ್ ದೀಪದ ಬೆಳಕಿನಿಂದ ಆಕರ್ಷಿತವಾಗಿ ಕೆಳಗೆ ಬೀಳುತ್ತಿವೆ.<br /> <br /> ಚಿಟ್ಟೆಗಳು ಸೌಂದರ್ಯಕ್ಕೆ ಹೆಸರಾಗಿದ್ದರೂ; ಅವು ಮಾಡುವ ಹಾನಿ ಅಷ್ಟಿಷ್ಟಲ್ಲ. ಅವು ಎಲೆಗಳ ಹಿಂದೆ ಮೊಟ್ಟೆಗಳನ್ನು ಇಡುವುದರಿಂದ, ಮೊಟ್ಟೆ ಒಡೆದು ಹೊರ ಬರುವ ಕಂಬಳಿ ಹುಳುಗಳು ಎಲೆ, ಹಣ್ಣು, ತರಕಾರಿಗಳನ್ನು ತಿಂದು ರೈತರಿಗೆ ಅಪಾರ ನಷ್ಟ ಉಂಟುಮಾಡುತ್ತವೆ. ಆದ್ದರಿಂದಲೇ ರೈತರು ಚಿಟ್ಟೆಯನ್ನು `ಸುಂದರ ಮೊಗದ ವಿಷ ಕನ್ಯೆ' ಎಂದು ಕರೆಯುತ್ತಾರೆ.<br /> <br /> ಬಯಲಿನ ಮೇಲೆ ಚಿಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರೆ ಕೃಷಿಕರು ಬೆಚ್ಚಿ ಬೀಳುತ್ತಾರೆ. ಅವುಗಳ ಸಂತಾನವಾದ ಹುಳುಗಳು ಕೋಸು, ಟೊಮೆಟೊ, ಆಲೂಗಡ್ಡೆ ಮುಂತಾದ ತೋಟದ ಬೆಳೆಗಳಿಗೆ ಹಾನಿ ಉಂಟು ಮಾಡುತ್ತವೆ. ಅವುಗಳ ನಿವಾರಣೆಗೆ ಸಾವಿರಾರು ರೂಪಾಯಿ ಬೆಲೆಯ ಕೀಟನಾಶಕಗಳನ್ನು ಸಿಂಪರಣೆ ಮಾಡಬೇಕಾಗುತ್ತದೆ. ಈ ಕೀಟನಾಶಕಗಳು ಪರಿಸರದ ಮೇಲೆ ದುಷ್ಟರಿಣಾಮ ಬೀರುತ್ತವೆ. ಚಿಟ್ಟೆಯ ಸೌಂದರ್ಯದ ಹಿಂದೆ ಕರಾಳ ಮುಖವೂ ಇದೆ ಎಂಬುದನ್ನು ಮರೆಯುವಂತಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಶ್ರೀನಿವಾಸಪುರ: </strong>ತಾಲ್ಲೂಕಿನ ಮಾವಿನ ತೋಟಗಳ ಕಡೆ ಹೆಜ್ಜೆ ಹಾಕಿದರೆ, ಬಣ್ಣ ಬಣ್ಣದ ಚಿಟ್ಟೆಗಳು ಕಣ್ಣಿಗೆ ರಾಚುತ್ತವೆ. ಹಾರಾಡುವ ಹೂವುಗಳು ಎಂದು ಕರೆಯಲ್ಪಡುವ ಈ ಚಿಟ್ಟೆಗಳು ಈಗ ಮಾವಿನ ಮಡಿಲಿಗೆ ಹೊಸ ಮೆರುಗನ್ನು ತಂದುಕೊಟ್ಟಿವೆ. ನೋಡುವ ಕಣ್ಣಲ್ಲಿ ಬೆರಗು ತುಂಬಿವೆ!</span><br /> <br /> ಸಂಜೆಯ ಹೂ ಬಿಸಿಲಲ್ಲಿ ಮಾವಿನ ತೋಟಗಳ ಬೇಲಿ ಮತ್ತು ರಸ್ತೆ ಪಕ್ಕದ ಲಂಟಾನ ಗಿಡಗಳ ಹೂಗಳಿಂದ ಮಕರಂದವನ್ನು ಹೀರುತ್ತ ಹಾರುವ ಬಣ್ಣ ಬಣ್ಣದ ಚಿಟ್ಟೆಗಳು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತವೆ. ಆಸಕ್ತಿಯಿಂದ ನಿಂತು ನೋಡಿದರೆ, ಪರಿಸರ ಹಾರುವ ಚಿತ್ರಶಾಲೆಯಂತೆ ಗೋಚರಿಸುತ್ತದೆ. ಈಗಂತೂ ಈ ಚಿಟ್ಟೆಗಳು ಮಿಲನೋತ್ಸವ ಆಚರಿಸಿಕೊಳ್ಳುತ್ತಿವೆ.<br /> <br /> ಪ್ರಪಂಚದಲ್ಲಿ 1.5 ಲಕ್ಷ ಜಾತಿಯ ಚಿಟ್ಟೆಗಳಿವೆ. ಭಾರತದಲ್ಲಿ 1400 ತರದ ಚಿಟ್ಟೆಗಳಿವೆ. ಆ ಪೈಕಿ 350 ಜಾತಿಯ ಚಿಟ್ಟೆಗಳು ದಕ್ಷಿಣ ಭಾರತದಲ್ಲಿವೆ. ಪಶ್ಚಿಮ ಘಟ್ಟಗಳನ್ನು ಚಿಟ್ಟೆಗಳ ಸ್ವರ್ಗ ಎಂದು ಕರೆಯಲಾಗುತ್ತದೆ. ಆದರೆ ಬಯಲುಸೀಮೆ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ದುಂಬಿ ಜೇನ್ನೊಣಗಳಂತೆ ಚಿಟ್ಟೆಗಳೂ ಸಹ ಹೂಗಳಲ್ಲಿ ಪರಾಗಸ್ಪರ್ಶಕ್ಕೆ ನೆರವಾಗುತ್ತವೆ. ಇವುಗಳನ್ನು ಆಕರ್ಷಿಸಲೆಂದೇ ಹೂಗಳು ರಿಮಳ ಹೊರ ಸೂಸುತ್ತವೆ.<br /> <br /> ತಾಲ್ಲೂಕಿನಲ್ಲಿ ಮಳೆಯಿಲ್ಲದೆ ಬಿರು ಬೇಸಿಗೆ ವಾತಾವರಣ ನಿರ್ಮಾಣವಾಗಿದೆ. ಹೊರಗೆ ನೀರು ಸಿಗುತ್ತಿಲ್ಲ. ವಾತಾವರಣದಲ್ಲಿ ಉಷ್ಣಾಂಶ ಒಂದೇ ಸಮನೆ ಏರುತ್ತಿದೆ. ಇದರಿಂದಲೇ ಇರಬೇಕು, ಹೂವಿಂದ ಹೂವಿಗೆ ಹಾರಬೇಕಾದ ಚಿಟ್ಟೆಗಳು ಗ್ರಾಮೀಣ ಪ್ರದೇಶದ ಬಚ್ಚಲಿನ ತೇವದ ಮೇಲೂ ಕುಳಿತುಕೊಳ್ಳುತ್ತಿವೆ.<br /> <br /> ಹೂವಿನ ಮೇಲೆ ಮಾತ್ರವಲ್ಲದೆ ಪರಿಮಳಯುಕ್ತವಾದ ನಿಂಬೆ ಮತ್ತಿತರ ಗಿಡಗಳ ಎಲೆಗಳ ಮೇಲೂ ಕುಳಿತು, ಎದ್ದು ಹಾರಾಡುತ್ತಿವೆ. ಈ ಬಾರಿ ರಾತ್ರಿ ಹೊತ್ತು ಬಣ್ಣದಲ್ಲಿ ಅಷ್ಟೇನೂ ಆಕರ್ಷಣೆ ಇಲ್ಲದ ಪತಂಗಗಳೂ ಕಾಣಿಸಿಕೊಳ್ಳುತ್ತಿವೆ. ಅವು ವಿದ್ಯುತ್ ದೀಪದ ಬೆಳಕಿನಿಂದ ಆಕರ್ಷಿತವಾಗಿ ಕೆಳಗೆ ಬೀಳುತ್ತಿವೆ.<br /> <br /> ಚಿಟ್ಟೆಗಳು ಸೌಂದರ್ಯಕ್ಕೆ ಹೆಸರಾಗಿದ್ದರೂ; ಅವು ಮಾಡುವ ಹಾನಿ ಅಷ್ಟಿಷ್ಟಲ್ಲ. ಅವು ಎಲೆಗಳ ಹಿಂದೆ ಮೊಟ್ಟೆಗಳನ್ನು ಇಡುವುದರಿಂದ, ಮೊಟ್ಟೆ ಒಡೆದು ಹೊರ ಬರುವ ಕಂಬಳಿ ಹುಳುಗಳು ಎಲೆ, ಹಣ್ಣು, ತರಕಾರಿಗಳನ್ನು ತಿಂದು ರೈತರಿಗೆ ಅಪಾರ ನಷ್ಟ ಉಂಟುಮಾಡುತ್ತವೆ. ಆದ್ದರಿಂದಲೇ ರೈತರು ಚಿಟ್ಟೆಯನ್ನು `ಸುಂದರ ಮೊಗದ ವಿಷ ಕನ್ಯೆ' ಎಂದು ಕರೆಯುತ್ತಾರೆ.<br /> <br /> ಬಯಲಿನ ಮೇಲೆ ಚಿಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರೆ ಕೃಷಿಕರು ಬೆಚ್ಚಿ ಬೀಳುತ್ತಾರೆ. ಅವುಗಳ ಸಂತಾನವಾದ ಹುಳುಗಳು ಕೋಸು, ಟೊಮೆಟೊ, ಆಲೂಗಡ್ಡೆ ಮುಂತಾದ ತೋಟದ ಬೆಳೆಗಳಿಗೆ ಹಾನಿ ಉಂಟು ಮಾಡುತ್ತವೆ. ಅವುಗಳ ನಿವಾರಣೆಗೆ ಸಾವಿರಾರು ರೂಪಾಯಿ ಬೆಲೆಯ ಕೀಟನಾಶಕಗಳನ್ನು ಸಿಂಪರಣೆ ಮಾಡಬೇಕಾಗುತ್ತದೆ. ಈ ಕೀಟನಾಶಕಗಳು ಪರಿಸರದ ಮೇಲೆ ದುಷ್ಟರಿಣಾಮ ಬೀರುತ್ತವೆ. ಚಿಟ್ಟೆಯ ಸೌಂದರ್ಯದ ಹಿಂದೆ ಕರಾಳ ಮುಖವೂ ಇದೆ ಎಂಬುದನ್ನು ಮರೆಯುವಂತಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>