<p><strong>ಕಾರಟಗಿ: </strong>ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜನ, ಜಾನುವಾರುಗಳಿಗೆ ಕುಡಿಯುವುದಕ್ಕಾಗಿ ನೀರು ಬಿಡಲಾಗಿದೆ. ಇಲ್ಲಿಯ 31ನೇ ಕಾಲುವೆಗೆ ಗುರುವಾರದಿಂದ ನೀರು ಬಿಡಲಾಗಿದ್ದು, ದೇವಿಕ್ಯಾಂಪ್ ತಿರುವು ಬಳಿ ಭಾರಿ ಪ್ರಮಾಣದ ನೀರು ಪೋಲಾಗಿ, ಪಕ್ಕದ ಜಮೀನುಗಳಿಗೆ ಹರಿದಿದೆ. <br /> <br /> ನಾಲೆ ಭೋಂಗಾ ಬಿದ್ದಿದೆ ಎಂಬ ವದಂತಿ, ಆತಂಕದಿಂದ ನೂರಾರು ನಾಗರಿಕರು ಸ್ಥಳಕ್ಕೆ ಭೇಟಿ ನೀಡುತ್ತಿರುವುದು ಶುಕ್ರವಾರ ಕಂಡುಬಂತು.ಕುಡಿಯುವ ನೀರಿನ ಯೋಜನೆಯ ಪೈಪ್ ನಾಲೆಯ ಮುಖಾಂತರ ಹೋಗಿದ್ದು, ಇದಕ್ಕಾಗಿ ಒಳಮೈ ಹೊಡೆಯಲಾಗಿದೆ. <br /> <br /> ಅದೇ ಸ್ಥಳದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಪೋಲಾಗಿರುವುದು ಕಂಡುಬಂತು. ಒಳಮೈ, ಹೊರಮೈ ಶಿಥಿಲಗೊಂಡಿದೆ. ಮುಂದೆ ನೀರು ಬಿಡುವುದರೊಳಗೆ ದುರಸ್ತಿ ಮಾಡಿಸಲು ಇಲಾಖೆ ಮುಂದಾಗಬೇಕು ಎಂದು ಸ್ಥಳದಲ್ಲಿದ್ದ ಬೂದಗುಂಪಾದ ವೀರನಗೌಡ, ಪಾಮಣ್ಣ ಗಿಣಿವಾರ ಆಗ್ರಹಿಸಿದರು.<br /> <br /> ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎ. ಬಿ. ಚಿಕೊಪ್ಪ, ಸೂಗಪ್ಪ ಭೇಟಿಯಾದ `ಪ್ರಜಾವಾಣಿ~ಯೊಂದಿಗೆ ಮಾತನಾಡಿ `ದೇವಿಕ್ಯಾಂಪ್ ತಿರುವು ಬಳಿಯ ಸೇತುವೆಯಲ್ಲಿ ಅಧಿಕ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹಗೊಂಡು ನೀರು ಮುಂದೆ ಹೋಗದೆ ನಾಲೆಯ ಹೊರಗೆ ಹರಿದಿದೆ. <br /> <br /> ತ್ಯಾಜ್ಯ ತಗೆಯಿಸಿದ್ದು, ನೀರಿನ ಹರಿಯುವಿಕೆ ಸಹಜವಾಗಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರು ಸಂಗ್ರಹಕ್ಕಾಗಿ ನಾಲೆಯಲ್ಲಿ ನೀರು ಬಿಡಲಾಗಿದೆ. ಇದರಿಂದ ಗಂಗಾವತಿ ಹಾಗೂ ಸಿಂಧನೂರ ತಾಲ್ಲೂಕು ವ್ಯಾಪ್ತಿಯಲ್ಲಿ ಕೆರೆಗಳನ್ನು ತುಂಬಿಸಿಕೊಂಡು ಮುಂದೆ ಉಪಯೋಗಿಸಿಕೊಳ್ಳಲು ಅನುಕೂಲ ಆಗಲಿದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ: </strong>ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜನ, ಜಾನುವಾರುಗಳಿಗೆ ಕುಡಿಯುವುದಕ್ಕಾಗಿ ನೀರು ಬಿಡಲಾಗಿದೆ. ಇಲ್ಲಿಯ 31ನೇ ಕಾಲುವೆಗೆ ಗುರುವಾರದಿಂದ ನೀರು ಬಿಡಲಾಗಿದ್ದು, ದೇವಿಕ್ಯಾಂಪ್ ತಿರುವು ಬಳಿ ಭಾರಿ ಪ್ರಮಾಣದ ನೀರು ಪೋಲಾಗಿ, ಪಕ್ಕದ ಜಮೀನುಗಳಿಗೆ ಹರಿದಿದೆ. <br /> <br /> ನಾಲೆ ಭೋಂಗಾ ಬಿದ್ದಿದೆ ಎಂಬ ವದಂತಿ, ಆತಂಕದಿಂದ ನೂರಾರು ನಾಗರಿಕರು ಸ್ಥಳಕ್ಕೆ ಭೇಟಿ ನೀಡುತ್ತಿರುವುದು ಶುಕ್ರವಾರ ಕಂಡುಬಂತು.ಕುಡಿಯುವ ನೀರಿನ ಯೋಜನೆಯ ಪೈಪ್ ನಾಲೆಯ ಮುಖಾಂತರ ಹೋಗಿದ್ದು, ಇದಕ್ಕಾಗಿ ಒಳಮೈ ಹೊಡೆಯಲಾಗಿದೆ. <br /> <br /> ಅದೇ ಸ್ಥಳದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಪೋಲಾಗಿರುವುದು ಕಂಡುಬಂತು. ಒಳಮೈ, ಹೊರಮೈ ಶಿಥಿಲಗೊಂಡಿದೆ. ಮುಂದೆ ನೀರು ಬಿಡುವುದರೊಳಗೆ ದುರಸ್ತಿ ಮಾಡಿಸಲು ಇಲಾಖೆ ಮುಂದಾಗಬೇಕು ಎಂದು ಸ್ಥಳದಲ್ಲಿದ್ದ ಬೂದಗುಂಪಾದ ವೀರನಗೌಡ, ಪಾಮಣ್ಣ ಗಿಣಿವಾರ ಆಗ್ರಹಿಸಿದರು.<br /> <br /> ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎ. ಬಿ. ಚಿಕೊಪ್ಪ, ಸೂಗಪ್ಪ ಭೇಟಿಯಾದ `ಪ್ರಜಾವಾಣಿ~ಯೊಂದಿಗೆ ಮಾತನಾಡಿ `ದೇವಿಕ್ಯಾಂಪ್ ತಿರುವು ಬಳಿಯ ಸೇತುವೆಯಲ್ಲಿ ಅಧಿಕ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹಗೊಂಡು ನೀರು ಮುಂದೆ ಹೋಗದೆ ನಾಲೆಯ ಹೊರಗೆ ಹರಿದಿದೆ. <br /> <br /> ತ್ಯಾಜ್ಯ ತಗೆಯಿಸಿದ್ದು, ನೀರಿನ ಹರಿಯುವಿಕೆ ಸಹಜವಾಗಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರು ಸಂಗ್ರಹಕ್ಕಾಗಿ ನಾಲೆಯಲ್ಲಿ ನೀರು ಬಿಡಲಾಗಿದೆ. ಇದರಿಂದ ಗಂಗಾವತಿ ಹಾಗೂ ಸಿಂಧನೂರ ತಾಲ್ಲೂಕು ವ್ಯಾಪ್ತಿಯಲ್ಲಿ ಕೆರೆಗಳನ್ನು ತುಂಬಿಸಿಕೊಂಡು ಮುಂದೆ ಉಪಯೋಗಿಸಿಕೊಳ್ಳಲು ಅನುಕೂಲ ಆಗಲಿದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>