‘ಬೆಂಗಳೂರಿನಲ್ಲಿ ನಡೆದ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಮಟ್ಟದ ಪಠ್ಯಪುಸ್ತಕ ತಿರುಚುವಿಕೆ ವಿರುದ್ಧದ ಸಭೆಯಲ್ಲಿ ನಾಡಿನ ಕವಿಗಳು, ಲೇಖಕರು, ಚಿಂತಕರು ಮತ್ತು ಶಿಕ್ಷಣ ತಜ್ಞರು ಈ ವಿಷಯವನ್ನು ದಾಖಲೆಗಳ ಸಮೇತ ಪ್ರಸ್ತಾಪಿಸಿದ್ದರು. ಐತಿಹಾಸಿಕ ಸತ್ಯಗಳನ್ನು ತಿರುಚಿರುವ ಸಮಿತಿಯ ಪರಿಷ್ಕರಣೆಯನ್ನು ಒಕ್ಕೊರ ಲಿನಿಂದ ವಿರೋಧಿಸಿದ್ದರು’ ಎಂದು ಬೆಟ್ಟದೂರು ಮಾಹಿತಿ ನೀಡಿದರು.