ದೇವಿಯ ದರ್ಶನ ಪಡೆಯಲು ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರು ಬಂದಿದ್ದರು. ಅವರಲ್ಲಿ ಅನೇಕರು ಪವಿತ್ರವೆಂದು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ನೈವೇದ್ಯ ಸಲ್ಲಿಸಿದರು. ಮಾಂಸಹಾರಿಗಳು ಕುರಿ, ಕೋಳಿ ತಂದು ಅಡುಗೆ ಸಿದ್ಧಪಡಿಸಿದರು. ಕೆಲ ಭಕ್ತರು ಬಯಲು ಜಾಗೆಯಲ್ಲಿ, ದೂರದ ಹೊಲದಲ್ಲಿ ಟೆಂಟ್ ಹಾಕಿ ಕುರಿ, ಕೋಳಿ ಬಲಿ ನೀಡಿದರೆ, ಇನ್ನೂ ಕೆಲವರು ತುಂಗಭದ್ರಾ ನದಿ ಮಧ್ಯದಲ್ಲಿ ಸ್ನಾನಕ್ಕೆ ಬಂದ ಭಕ್ತರ ಸಮ್ಮುಖದಲ್ಲಿ ಕುರಿ ಕಡಿದು ರಕ್ತವನ್ನು ನದಿಗೆ ಹರಿಸಿದರು. ಇದಕ್ಕೆ ಕೆಲ ಭಕ್ತರು ಆಕ್ಷೇಪ ವ್ಯಕ್ತಪಡಿಸಿದರೂ ಕೇಳಲಿಲ್ಲ. ನಿಷೇಧವಿದ್ದರೂ ಪ್ರಾಣಿಬಲಿ ಬಿಡಲಿಲ್ಲ.