ಕಾರಟಗಿ: ಲೋಕಸಭಾ ಚುನಾವಣೆಯ ನಿಮಿತ್ತ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಅನುಮತಿ ಪಡೆಯದೇ ಪ್ರಚಾರ ಕಾರ್ಯ ಕೈಗೊಂಡು ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವಾಗ ಅಧಿಕಾರಿಗಳು ದಾಳಿ ನಡೆಸಿ, ಸಭೆಯನ್ನು ಮೊಟಕುಗೊಳಿಸಿದ, ಭೋಜನದ ವ್ಯವಸ್ಥೆಗೆ ತಂದಿದ್ದ ಸಾಮಾನುಗಳನ್ನು ವಶಕ್ಕೆ ಪಡೆದ ಘಟನೆ ತಾಲ್ಲೂಕಿನ ಸಿದ್ದಾಪುರ ಹೋಬಳಿಯ ಕುಂಟೋಜಿ ಸೀಮಾದಲ್ಲಿ ಗುರುವಾರ ಜರುಗಿದ್ದು, ಶುಕ್ರವಾರ ಎಫ್ಐಆರ್ ದಾಖಲಾಗಿದೆ.