ಡಿಡಿಪಿಐ – ಗ್ರಾಮಸ್ಥರ ವಾಗ್ವಾದ
ಈ ಮಧ್ಯೆ ಮುಖ್ಯಶಿಕ್ಷಕಿ ಅಮಾನತು ಆದೇಶ ರದ್ದುಪಡಿಸುವಂತೆ ಒತ್ತಾಯಿಸಲು ಮಂಗಳವಾರ ಕೊಪ್ಪಳದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು ಮನವಿ ಸಲ್ಲಿಸಿದರು. ಆದರೆ ಆದೇಶ ರದ್ದುಪಡಿಸಲು ಸಾಧ್ಯವಿಲ್ಲ ಎಂದೆ ಉಪನಿರ್ದೇಶಕ ಹೇಳಿದರು ಎಂದು ಗ್ರಾಮಸ್ಥ ಶರಣಪ್ಪ ವಡ್ಡರ ಮಾಹಿತಿ ನೀಡಿದರು. ಆದರೆ ಜನರು ಶಾಲೆಗೆ ಬೀಗ ಹಾಕುವುದಿಲ್ಲ ಮಕ್ಕಳು ಶಾಲೆಗೆ ಬರುವುದಿಲ್ಲ ನೀವು ಏನಾದರೂ ಮಾಡಿಕೊಳ್ಳಿ ಎಂದು ಹೇಳಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಉಪನಿರ್ದೇಶಕರೊಂದಿಗೆ ಗ್ರಾಮಸ್ಥರು ವಾಗ್ವಾದಕ್ಕಿಳಿದಿದ್ದರು. ಮಕ್ಕಳ ಆರೋಗ್ಯದಲ್ಲಿ ತೊಂದರೆಯಾದರೆ ಯಾರು ಜವಾಬ್ದಾರಿ? ಎಂದು ಉಪನಿರ್ದೇಶಕ ಬಿರಾದಾರ ಪ್ರಶ್ನಿಸಿದರು ಎಂದು ಮೂಲಗಳು ತಿಳಿಸಿವೆ.