ಕೊಪ್ಪಳ: ಶಿಕ್ಷಕ ಡಿ.ರಾಮಣ್ಣ ಆಲ್ಮರ್ಸಿಕೇರಿ ಅವರು ರಚಿಸಿದ 'ಬೆಟ್ಟ ಬಯಲಾದ ಪರಿ' ಎಂಬ ಲೇಖನ ಸಂಕಲನ ಬಿಡುಗಡೆ ಫೆ.13ರಂದು ನಗರದ ಕಾಳಿದಾಸ ಪ್ರೌಢಶಾಲೆಯಲ್ಲಿ ಸಂಜೆ.4.30ಕ್ಕೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ ವಹಿಸಲಿದ್ದಾರೆ.
ಗಂಗಾವತಿಯ ಪ್ರಾಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪ ಕೃತಿ ಬಿಡುಗಡೆ ಮಾಡಲಿದ್ದಾರೆ. ಮುಖ್ಯಶಿಕ್ಷ ಎಸ್.ಎಸ್.ಗುರುವಿನ ಭಾಗವಹಿಸಲಿದ್ದಾರೆ ಎಂದು ಡಿ.ರಾಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.