ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕುಷ್ಟಗಿ | ಬಂದ್‌ ಆದ ಬಸ್‌ ನಿಲ್ದಾಣದ ಪ್ರವೇಶ ದ್ವಾರ: ಪ್ರಯಾಣಿಕರ ಪರದಾಟ

Published : 31 ಜನವರಿ 2025, 5:18 IST
Last Updated : 31 ಜನವರಿ 2025, 5:18 IST
ಫಾಲೋ ಮಾಡಿ
Comments
ಮಕ್ಕಳು ಮಹಿಳೆಯರು ವೃದ್ಧರು ಬಸ್‌ ನಿಲ್ದಾಣದ ಒಳಳಕ್ಕೆ ಹೋಗಬೇಕೆಂದರೆ ಬಹಳಷ್ಟು ತೊಂದರೆ ಇದೆ. ಅಧಿಕಾರಿಗಳು ಗಮನಹರಿಸಬೇಕು.
ವೀರೇಶ ಮಠಪತಿ ಪ್ರಯಾಣಿಕ
ಮುಖ್ಯದ್ವಾರದ ಬಳಿ ಆಟೊ ನಿಲ್ಲಿಸದಂತೆ ಈ ಹಿಂದೆಯೆ ಚಾಲಕರಿಗೆ ಸೂಚಿಸಲಾಗಿತ್ತು. ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು
ಸುಂದರಗೌಡ ಪಾಟೀಲ ಘಟಕ ವ್ಯವಸ್ಥಾಪಕ.
ಪ್ರಯಾಣಿಕರಿಗೆ ಕೊಳಚೆ ನೀರಿನ ಸಿಂಚನ
ಬಸ್‌ ನಿಲ್ದಾಣದಲ್ಲಿನ ಶೌಚಾಲಯ ಮೂತ್ರಾಲಯ ತೊಳೆದ ಮತ್ತು ಉಪಹಾರಗೃಹದ ಕೊಳಚೆ ನೀರು ನಿಲ್ದಾಣದ ಕೊಪ್ಪಳಕ್ಕೆ ತೆರಳುವ ಗೇಟ್‌ ಬಳಿ ಮಡುಗಟ್ಟಿ ನಿಲ್ಲುತ್ತಿದ್ದು ಪ್ರಯಾಣಿಕರಿಗೆ ಸಿಂಚನವಾಗುತ್ತಿದೆ. ಈ ಸಮಸ್ಯೆಯನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದು ಪ್ರಯಾಣಿಕರ ಆರೋಪ. ಈ ಕುರಿತು ಪ್ರತಿಕ್ರಿಯಿಸಿದ ಘಟಕ ವ್ಯವಸ್ಥಾಪಕ ಸುಂದರಗೌಡ ಪಾಟೀಲ ಮುಂದಿನ ರಸ್ತೆ ನಿಲ್ದಾಣಕ್ಕಿಂತ ಎತ್ತರದಲ್ಲಿರುವುದು ಚರಂಡಿಗಳು ಮುಚ್ಚಿಕೊಂಡಿರುವುದರಿಂದ ಸಮಸ್ಯೆಯಾಗಿದೆ. ಜನ ಚರಂಡಿಗೆ ತ್ಯಾಜ್ಯ ಸುರಿಯುತ್ತಾರೆ. ತೆಗೆದುಹಾಕುವಂತೆ ಪುರಸಭೆಗೆ ಪದೇ ಪದೇ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT