ಕನಕಗಿರಿ: ಇಲ್ಲಿನ ಕನಕಾಚಲಪತಿ ದೇಗುಲದಲ್ಲಿ ಪ್ರಸಕ್ತ ಸಾಲಿನ ಏಪ್ರಿಲ್ 11ರಿಂದ 2025ರ ಮಾರ್ಚ್ 31ರವರೆಗೆ ಸಗಟು ತೆಂಗಿನಕಾಯಿ ಹರಾಜು ಪ್ರಕ್ರಿಯೆ ಮಂಗಳವಾರ ನಡೆಯಿತು.
ಒಟ್ಟು ಮೂವರು ವರ್ತಕರು ಹರಾಜಿನಲ್ಲಿ ಭಾಗವಹಿಸಿದ್ದು ರಾಜು ಬಿಲ್ಲಂಕೊಂಡಿಮಠ ಅವರು ₹20.70 ಲಕ್ಷಕ್ಕೆ ಹರಾಜು ಕೂಗಿ ತಮ್ಮದಾಗಿಸಿಕೊಂಡರು.
ವಾರದ ಸಂತೆ ಹರಾಜಿನಲ್ಲಿ ಆರು ಜನರು ಬಿಡ್ದಾರರು ಭಾಗವಹಿಸಿದ್ದು, ಅವರಲ್ಲಿ ಶಂಕರ ಮಹಿಪತಿ ಅವರು ₹6.5 ಲಕ್ಷಕ್ಕೆ ಹರಾಜು ಪಡೆದುಕೊಂಡರು ಎಂದು ತಹಶೀಲ್ದಾರ್ ವಿಶ್ವನಾಥ ಮುರುಡಿ ತಿಳಿಸಿದ್ದಾರೆ.