ಕೊಪ್ಪಳ: ಕೇಂದ್ರ ಬಿಜೆಪಿಸರ್ಕಾರ ಮೂರು ಕೃಷಿ ಕಾನೂನುಗಳ ಮೂಲಕ ದೇಶದ ರೈತರನ್ನು ಸರ್ವನಾಶ ಮಾಡಲು ಹೊರಟಿರುವುದಕ್ಕೆ ದೇಶದ ನಾನಾ ಸಂಘಟನೆಗಳು ಹಮ್ಮಿಕೊಂಡಿರುವ ಹೋರಾಟಕ್ಕೆ ಕಾಂಗ್ರೆಸ್ ಪೂರ್ಣ ಬೆಂಬಲ ನೀಡಿಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದುಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ತಿಳಿಸಿದರು.
ಕೃಷಿಕರು ದೇಶದ ಬೆನ್ನೆಲುಬು. ಆದರೆ ಬಿಜೆಪಿ ಅದನ್ನೇ ಮುರಿಯಲು ಹೊರಟಿದೆ. ಈಗ ಮಾಡಿರುವ ಎಡವಟ್ಟೇ ಸಾಕಾಗಿದ್ದು, ದೇಶದಲ್ಲಿ ಮಾರಲು ಏನು ಉಳಿಸಿದ್ದಾರೆ ಎಂದು ತಿಳಿಯದ ಜನ ಈಗ ರೈತರ ಬೆಳೆಗೆ ನೇರವಾಗಿ ಕನ್ನ ಹಾಕಿದ್ದಾರೆ ಎಂದುಆಕ್ರೋಶ ವ್ಯಕ್ತಪಡಿಸಿದರು.