ದೈಹಿಕ ಅಂತರ, ವೈಯಕ್ತಿಕ ಸ್ವಚ್ಛತೆ, ಜಾಗೃತಿ ನಡುವೆಯೂ ಕೆಲವೊಂದು ಆತಂಕಕಾರಿ ಬೆಳವಣಿಗೆ ನಡೆಯುತ್ತಿದ್ದು, ಜನತೆ ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆ ಮಾಡಬಾರದು ಎಂದು ಜಿಲ್ಲಾಡಳಿತ ಪದೇ, ಪದೇ ಹೇಳುತ್ತಿದೆ. ಪಕ್ಕದ ಜಿಲ್ಲೆಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಿದ್ದು, ಜನರ ಓಡಾಟ ಸುಲಭವಾಗಿದ್ದರಿಂದ ಜಿಲ್ಲೆಗೆ ಆತಂಕ ಮಾತ್ರ ತಪ್ಪಿಲ್ಲ.