ಕೊಪ್ಪಳ: ಅಶ್ಲೀಲ ವಿಡಿಯೊ ಪ್ರಕರಣದ ಆರೋಪಿಯಾದ ಸಂಸದ ಪ್ರಜ್ವಲ್ ರೇವಣ್ಣ ವರನ್ನು ವಿದೇಶದಿಂದ ಬಂಧಿಸಿ ಕರೆತಂದು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕೆಪಿಸಿಸಿ ಜಿಲ್ಲಾ ಮಾಧ್ಯಮ ವಕ್ತಾರ (ಎಸ್.ಸಿ. ಘಟಕ) ಪರಶುರಾಮ್ ಕೆರೆಹಳ್ಳಿ ಅಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಎಸ್ಐಟಿಯಿಂದ ರೇವಣ್ಣ ಅವರಿಗೆ ನೋಟಿಸ್ ಕಳುಹಿಸಿದರೂ ಬಿಜೆಪಿ ಸರ್ಕಾರದ ವಿದೇಶಾಂಗ ಸಚಿವರು ಮತ್ತು ಪ್ರಧಾನಿ ನರೇಂದ್ರ ಮೋದಿ ಯಾವ ಕ್ರಮವೂ ಕೈಗೊಂಡಿಲ್ಲ. ಈ ಬಗ್ಗೆ ಅವರು ದೇಶದ ಜನರಿಗೆ ಉತ್ತರ ಕೊಡಬೇಕು’ ಎಂದಿದ್ದಾರೆ.